Kundapura: ವೆಂಕಟೇಶ್ ಪೈ ಅವರಿಗೆ 'ಅಪ್ಪಣ್ಣ ಹೆಗ್ಡೆ ಜೀವಮಾನ ಸಾಧನಾ ಪ್ರಶಸ್ತಿ-2024'
Monday, January 29, 2024
ಕುಂದಾಪುರ: ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಕೋಟೇಶ್ವರ ಮತ್ತು ಕುಂದಾಪುರ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಜ.26 ರಂದು ಕೋಟೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳವರು 'ಅಪ್ಪಣ್ಣ ಹೆಗ್ಡೆ ಜೀವಮಾನ ಸಾಧನಾ ಪ್ರಶಸ್ತಿ-2024' ಪ್ರಶಸ್ತಿಯನ್ನು 'ಸಂಜೆ ಪ್ರಭ' ಪತ್ರಿಕೆಯ ಸಂಪಾದಕ ವೆಂಕಟೇಶ್ ಪೈ ಅವರಿಗೆ ನೀಡಿ ಆಶೀರ್ವಚಿಸಿದರು.
ಎಸ್. ಸತೀಶ್ ಕುಮಾರ್, ಆನಂದ್ ಬಿಳಿಯಾರ್ ಬೀಜಾಡಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಗುಲಾಬಿಯಮ್ಮ, ಕೆ.ಆರ್. ನಾಯಕ್, ಗಣೇಶ್ ಶೆಟ್ಟಿ, ರಮೇಶ್ ಎಚ್.ಎಸ್, ಮಂಜುನಾಥ್ ಕುಂದರ್, ಗಣಪತಿ ಟಿ. ಶ್ರೀಯಾನ್ ಮತ್ತಿತರರು ಉಪಸ್ಥಿತರಿದ್ದರು.