Mangalore: ನವೋದಯ ಟ್ರಸ್ಟ್ ವತಿಯಿಂದ ವಿಮೆ ಚೆಕ್ ವಿತರಣೆ

Mangalore: ನವೋದಯ ಟ್ರಸ್ಟ್ ವತಿಯಿಂದ ವಿಮೆ ಚೆಕ್ ವಿತರಣೆ


ಮಂಗಳೂರು: ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಪ್ರಾಯೋಜಿತ ನವೋದಯ ಸ್ವಸಹಾಯ ಸಂಘದ ಸದಸ್ಯೆ ಈಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಈ ಕುಟುಂಬದ ವಾರಿಸುದಾರರಿಗೆ ವಿಮೆ ಚೆಕ್ ನ್ನು ಶುಕ್ರವಾರ  ಸಂಸ್ಥೆಯ ಮೇನೆಜಿಂಗ್ ಟ್ರಸ್ಟಿ ಹಾಗೂ ಎಸ್ ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ವಿತರಿಸಿದರು.

ಮಂಗಳೂರು ತಾಲೂಕಿನ ಬಜಪೆ ಕಿನ್ನಿಕಂಬಳ ಗ್ರಾಮದಲ್ಲಿರುವ ಜ್ಯೋತಿ ನವೋದಯ ಸ್ವಸಹಾಯ ಸಂಘದ ಸದಸ್ಯೆ ವಿದ್ಯಾಲಕ್ಷ್ಮಿ ಇವರು  ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮರಣ ಹೊಂದಿರುತ್ತಾರೆ. ಈ ಸಂಬಂಧ ಮೃತರ ಮಗ ಉದಯ ಆರ್. ರಾವ್ ಅವರಿಗೆ ಚೈತನ್ಯ ಸ್ವಸಹಾಯ ಆರೋಗ್ಯ ವಿಮಾ ಯೋಜನೆಯ ಒಂದು ಲಕ್ಷದ ಚೆಕ್ ನ್ನು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ವಿತರಿಸಿದರು.

ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article