ಇಂದಿನಿಂದ ಸೇವಾ ಭಾರತಿ ವತಿಯಿಂದ ದೀಪಾವಳಿ ಹಣತೆ ಪ್ರದರ್ಶನ ಮತ್ತು ಮಾರಾಟ

ಇಂದಿನಿಂದ ಸೇವಾ ಭಾರತಿ ವತಿಯಿಂದ ದೀಪಾವಳಿ ಹಣತೆ ಪ್ರದರ್ಶನ ಮತ್ತು ಮಾರಾಟ

ಮಂಗಳೂರು: ಸೇವಾ ಭಾರತಿ (ರಿ) ಇದರ ಅಂಗಸಂಸ್ಥೆ ಚೇತನಾ ಬಾಲ ವಿಕಾಸ ಕೇಂದ್ರದಲ್ಲಿ ಅ.21 ರಿಂದ ನ.1 ರವರೆಗೆ ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ದೀಪಾವಳಿ ಹಣತೆಯ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಮಂಗಳೂರಿನ ವಿ.ಟಿ. ರಸ್ತೆಯ ಚೇತನಾ ಬಾಲ ವಿಕಾಸ ಕೇಂದ್ರದ ವಿಶೇಷ ಚೇತನ ಮಕ್ಕಳಿಂದ ತಯಾರಾದ ದೀಪಾವಳಿ ಹಣತೆಯನ್ನು ನಾವು ಸಾರ್ವಜನಿಕರಿಗೋಸ್ಕರ ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ಇವುಗಳ ವಿಶೇಷತೆಯೇನೆಂದರೆ, ಈ ಹಣತೆಗೆ ಬಣ್ಣ ನೀಡಿ ಅದನ್ನು ಆಕರ್ಷಣೀಯವಾಗಿ ಕಾಣುವಂತೆ ಮಾಡಿರುವುದು ನಮ್ಮ ವಿಶೇಷ ಚೇತರ ಮಕ್ಕಳು.

ಈ ವರ್ಷ ನಾವು ಹೆಚ್ಚುವರಿಯಾಗಿ ವಿವಿಧ ವಿನ್ಯಾಸದ ದೀಪಗಳನ್ನು ವಿಶೇಷವಾಗಿ ತಯಾರು ಮಾಡಿದ್ದೇವೆ. ಇವುಗಳಲ್ಲದೆ ಮಕ್ಕಳು ಮಾಡಿದಂತಹ ಕೈಚೀಲಗಳು, ಪರ್ಸ್, ಹೂಗಳ ವಿವಿಧ ವಿನ್ಯಾಸಗಳು, ಇತರ ಕರಕುಶಲ ವಸ್ತುಗಳು ಮಾರಟಕ್ಕೆ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article