
ಮೂಡುಬಿದಿರೆ ವೈದ್ಯರ ಸಂಘದಿಂದ ಡಾ. ವಿನಯ್ ಆಳ್ವ ಅವರಿಗೆ ಸನ್ಮಾನ
Friday, November 1, 2024
ಮೂಡುಬಿದಿರೆ: ಆಳ್ವಾಸ್ ಆಸ್ಪತ್ರೆಯನ್ನು ಹೊಸ ಹೊಸ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಮಾಡುತ್ತಾ ಹಾಗೂ ತನ್ನ ಶಾಸ್ತ್ರ ಚಿಕಿತ್ಸಾ ಪರಿಣತಿಯಿಂದ ಹಲವಾರು ರೋಗಿಗಳನ್ನು ಗುಣಮುಖರಾಗಿಸಿ ಮೂಡುಬಿದಿರೆಯ ಜನತೆಗೆ ಉತ್ತಮ ಆರೋಗ್ಯದ ಸೇವೆಯನ್ನು ನೀಡುತ್ತಾ ಬಂದಿರುವ ಡಾ. ವಿನಯ್ ಆಳ್ವ ಅವರನ್ನು ಮೂಡುಬಿದಿರೆ ವೈದ್ಯರ ಸಂಘವು ಗುರುವಾರ ಸನ್ಮಾನಿಸಿತು.
ವೈದ್ಯರ ಸಂಘದ ಅಧ್ಯಕ್ಷ ಡಾ. ಮಹಾವೀರ ಜೈನ್, ಕಾರ್ಯದರ್ಶಿ ಡಾ. ಪ್ರಶಾಂತ, ಡಾ. ವಿನಯ್ ಕುಮಾರ್, ಡಾ. ಸದಾನಂದ ನಾಯಕ್, ಡಾ. ಭರತೇಶ್ ಉಪಸ್ಥಿತರಿದ್ದರು.