
ಕಾವಳಕಟ್ಟೆಯಲ್ಲಿ ಕಣಜ ಹುಳ ಕಡಿತ: ಯುವಕ ಗಂಭೀರ
Saturday, December 7, 2024
ಬಂಟ್ವಾಳ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವನ ಮೇಲೆ ಕಣಜ ಹುಳಗಳು ದಾಳಿ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾವಳಕಟ್ಟೆ ಎಂಬಲ್ಲಿ ಸಂಭವಿಸಿದೆ.
ಕಾವಳಕಟ್ಟೆ ನಿವಾಸಿ ಮುಹೀಬ್ (25) ಕಡಿತಕ್ಕೊಳಗಾಗಿದ್ದು, ಅವರನ್ನು ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಅವರ ತಲೆ ಹಾಗೂ ಇತರ ದೇಹದ ಹಲವಾರು ಭಾಗಗಳಿಗೆ ಗಾಯಗಳಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಅದೇ ಸ್ಥಳದಲ್ಲಿ ಇನ್ನೋರ್ವ ಪಾದಾಚಾರಿಗೂ ಕಣಜ ಹುಳಗಳು ದಾಳಿ ಮಾಡಿದೆ ಎಂದು ತಿಳಿದು ಬಂದಿದೆ.