ಹಾಡುಹಗಲೇ ಲಕ್ಷಾಂತರ ಚಿನ್ನಾಭರಣ ಕಳವು

ಹಾಡುಹಗಲೇ ಲಕ್ಷಾಂತರ ಚಿನ್ನಾಭರಣ ಕಳವು

ಪುತ್ತೂರು: ಹಾಡುಹಗಲು ಮನೆಯೊಂದರ ಹಿಂಬದಿಯ ಬಾಗಿಲುಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಕಡಬ ತಾಲೂಕಿನ ಆಲಂಕಾರು ಗ್ರಾಮದಲ್ಲಿ ನಡೆದಿದೆ. 

ಆಲಂಕಾರು ಗ್ರಾಮದ ಕಲ್ಲೇರಿ ನಿವಾಸಿ ಸುಧಾಕರ ಪೂಜಾರಿ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಸುಮಾರು ರೂ.೪ ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳರು ದೋಚಿದ್ದಾರೆ. ಆಲಂಕಾರು-ಶಾಂತಿಮೊಗರು ರಸ್ತೆಯ ಬದಿಯಲ್ಲಿ ಕಲ್ಲೇರಿ ಎಂಬಲ್ಲಿ ಅವರ ಮನೆಯಿದ್ದು, ಮಧ್ಯಾಹ್ನದ ಹೊತ್ತು ಸುಧಾಕರ ಪೂಜಾರಿ ಅವರು ಪೇಟೆಗೆ ತೆರಳಿದ್ದರು. ಅವರ ಪತ್ನಿ ಸೌಮ್ಯಲತಾ ಅವರು ತೋಟಕ್ಕೆ ಹೋಗಿದ್ದರು. ಈ ಸಂದರ್ಭ ಕಳ್ಳರು ಮನೆಯ ಹಿಂಭಾಗದಿಂದ ಮನೆಯೊಳಗೆ ಪ್ರವೇಶಿಸಿ ಈ ಕೃತ್ಯ ನಡೆದಿದ್ದಾರೆ. ಈ ಬಗ್ಗೆ ಕಡಬ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ. 

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಗಿಲ ಬಳಿ ಹೆಜ್ಜೆ ಗುರುತು ಇದ್ದು, ಶ್ವಾನದಳ ಕರೆಸಿ ತನಿಖೆ ನಡೆಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article