ಕರಾಟೆ ಚಾಂಪಿಯನ್‌ಶಿಪ್: ಫಿಲೋಮಿನಾ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸೃಧನ ಆಳ್ವ ಕೆ.ಗೆ ಪ್ರಶಸ್ತಿ

ಕರಾಟೆ ಚಾಂಪಿಯನ್‌ಶಿಪ್: ಫಿಲೋಮಿನಾ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸೃಧನ ಆಳ್ವ ಕೆ.ಗೆ ಪ್ರಶಸ್ತಿ


ಪುತ್ತೂರು: ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಅಲೈಡ್ ಆರ್ಟ್ಸ್, ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆದ 42ನೇ ಬಿ.ಕೆ.ಐ. ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ 16-18 ವರ್ಷದ ಪುರುಷ ವಿಭಾಗದ ವೈಯಕ್ತಿಕ ಕಟಾ ಮತ್ತು 50+ಕೆ.ಜಿ ವಿಭಾಗದ ವೈಯಕ್ತಿಕ ಕುಮಿಟೆ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಸೃಧನ ಆಳ್ವ ಕೆ. ಅವರು ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಇವರು ನಾರಾಯಣ ಆಳ್ವ ಕೆ. ಮತ್ತು ಸುಲೋಚನಾ ದಂಪತಿಗಳ ಪುತ್ರ. ನಾರಾಯಣ ಆಚಾರ್ಯ ತರಬೇತಿ ನೀಡುತ್ತಾರೆ. ಪ್ರಾಂಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಕಾಲೇಜಿನ ಡಾ. ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article