ನೇತ್ರಾವತಿಯಲ್ಲಿ ನೀರಿನಹರಿವು ಯಥಾಸ್ಥಿತಿ

ನೇತ್ರಾವತಿಯಲ್ಲಿ ನೀರಿನಹರಿವು ಯಥಾಸ್ಥಿತಿ


ಬಂಟ್ವಾಳ: ವಾಯುಭಾರ ಕುಸಿತದ ಪರಿಣಾಮ ಸೋಮವಾರ ರಾತ್ರಿಯಿಂದೀಚೆಗೆ ಸುರಿದ ಮಳೆಗೆ ಬಂಟ್ವಾಳ ತಾಲೂಕಿನ ವಿವಿದೆಡೆಯಲ್ಲಿ ಹಾನಿಗಳಾಗಿ ಒಂದಷದಟು ನಷ್ಟ ಕೂಡ ಉಂಟಾಗಿದೆ, ಆದರೆ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟದಲ್ಲಿ ಯಾವುದೇ ವ್ಯತ್ಯಾಸಗಳು ಕಂಡು ಬಾರದೆ ಯಥಾಸ್ಥಿತಿಯಲ್ಲಿ ಹರಿಯುತ್ತಿದೆ ಎಂದು ತಾಲೂಕು ಆಡಳಿತ ಅಧಿಕೃತ ಮಾಹಿತಿ ನೀಡಿದೆ.

ಬುಧವಾರ ಬೆಳಗ್ಗಿನ ಹೊತ್ತು ನೇತ್ರಾವತಿ ನದಿಯಲ್ಲಿ 3.9 ಮಿ.ಮಿ.ನಷ್ಟು ಮಟ್ಟದಲ್ಲಿ ಹರಿಯುತ್ತಿದ್ದು, ಸಾಮಾನ್ಯವಾಗಿ ತಿಳಿಯಾಗಿಯೇ ನೀರು ಹರಿಯುತ್ತಿದೆ ಎಂದು ಪ್ರಕಟಣೆ ತಿಳಿಸಿದ್ದು, ಘಟ್ಟ ಪ್ರದೇಶಗಳಲ್ಲಿ ವಿಪರೀತವಾದ ಗಾಳಿ, ಮಳೆಯಾದರೆ ನೇತ್ರಾವತಿ ನದಿಯಲ್ಲು ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ. ಮತ್ತು ಕೆಸರು ಮಿಶ್ರಿತ ನೀರು ತುಂಬಿ ಹರಿಯುತ್ತದೆ ಎಂದು ಪ್ರಕಟಣೆ ತಿಳಿಸಿದೆ.

5 ಮೀ.ಗಿಂತ ಕಡಿಮೆಯಾಗಿಲ್ಲ:

ಪ್ರಸ್ತುತ ಜನವರಿಯಿಂದಲೇ ಬಿಸಿಲಿನ ಝಳ ವಿಪರೀತವಾಗಿದ್ದರೂ ತುಂಬೆ ವೆಂಟಡ್ ಡ್ಯಾಂನಲ್ಲಿ ನೀರಿನ ಕೊರತೆಯಾಗಿಲ್ಲ, ಡ್ಯಾಂನಲ್ಲಿ ಐದು ಮೀ. ಇದಕ್ಕಿಂತ ಹೆಚ್ಚೇ ನೀರನ್ನು ಕಾಯ್ದುಕೊಂಡು ಬರಲಾಗಿತ್ತು. ಹಾಗಾಗಿ ಮಂಗಳೂರಿನ ಜನತೆ ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಿಲ್ಲ, ಅದೇರೀತಿ ಜಕ್ರಿಬೆಟ್ಟುವಿನ ನೂತನ ಡ್ಯಾಂನಲ್ಲಿಯು 3.30 ಅಡಿಯಷ್ಟು ನೀರನ್ನು ಶೇಖರಿಸಿಡಲಾಗಿದ್ದರಿಂದ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲು ಕುಡಿಯುವ ನೀರಿಗೆ ಸಮಸ್ಯೆ ಕಾಡಿಲ್ಲ, ಕೆಲ ತಾಂತ್ರಿಕ ತೊಂದರೆಯಿಂದ ಗುಡ್ಡಪ್ರದೇಶಗಳಿಗೆ ನೀರು ಪೂರೈಕೆಯಾಗದ್ದು ಬಿಟ್ಟರೆ ನೇತ್ರಾವತಿಯಲ್ಲಿ ನೀರಿನ ಕೊರತೆಯಾಗಿ ಸಮಸ್ಯೆ ಉಂಟಾಗಿಲ್ಲ.

ಮುಂಗಾರು ಪೂರ್ವ ಭಾವಿಯಾಗಿಯು ಮಳೆ ಸುರಿದಿದ್ದರಿಂದ ನೇತ್ರಾವತಿಯಲ್ಲಿ ಒಟ್ಟಾರೆ ನೀರಿನ ಮಟ್ಟದಲ್ಲಿ ನೀರಿನ ಏರಿಕೆಯಾಗದಿದ್ದರೂ, ವೆಂಟೆಡ್ ಡ್ಯಾಂನಲ್ಲಿ ನೀರು ಶೇಖರಿಸಿದರಿಂದ ನೀರು ಸಮೃದ್ಧವಾಗಿ ಹರಿಯುತ್ತಿದೆ.

ತುಂಬೆ ಡ್ಯಾಂನಲ್ಲಿ ತುಂಬಿದ ನೀರು:

ಬುಧವಾರವು ತುಂಬೆ ಡ್ಯಾಮ್‌ನಲ್ಲಿ 6 ಮೀ.ಗೆ ನಿಲುಗಡೆಗೊಳಿಸಿ ಹೆಚ್ಚುವರಿ ನೀರನ್ನು ಡ್ಯಾಂನ ಒಂದು ಗೇಟ್ ಮೂಲಕ ಹೊರಭಾಗಕ್ಕೆ ಬಿಡಲಾಗುತ್ತಿದೆ. ಶಂಭೂರು

ಎಎಂಆರ್ ಹಾಗೂ ಜಕ್ರಿಬೆಟ್ಟು ಡ್ಯಾಂನಲ್ಲಿಯು ಹೆಚ್ಚುವರಿಯಾದ ನೀರನ್ನು ಕೆಳಭಾಗಕ್ಕೆ ಬಿಡಲಾಗಿದ್ದರಿಂದ ತುಂಬೆ ಡ್ಯಾಂನಲ್ಲಿ 6 ಮೀ. ಅಡಿಗಿಂತ ಹೆಚ್ಚುವರಿಯಾಗಿರುವ ಹಿನ್ನಲೆಯಲ್ಲಿ 30 ಗೇಟ್‌ಗಳ ಪೈಕಿ ಒಮಜದನ್ನು ತೆರೆಯಲಾಗಿದೆ. ಬಿಳಿಯೂರು ಡ್ಯಾಂನಿಂದಲು ಹೆಚ್ಚುವರಿ ನೀರನ್ನು ತುಂಬೆ ಡ್ಯಾಂನತ್ತ ಬಿಡುವ ನಿರೀಕ್ಷೆ ಇದೆಯೆನ್ನಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article