
ಸಾಧನೆಯ ಸಾಕಾರಕ್ಕೆ ಪರಿಶ್ರಮ ಅತ್ಯಗತ್ಯ: ಪ್ರೊ. ನರೇಂದ್ರ ಎಲ್. ನಾಯಕ್
ಮಂಗಳೂರು: ಸಾಧನೆಯ ಸಾಕಾರಕ್ಕೆ ಪರಿಶ್ರಮ ಅತ್ಯಗತ್ಯ ಎಂದು ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಹೇಳಿದರು.
ವಳಚ್ಚಿಲ್ ಎಕ್ಸ್ಪರ್ಟ್ ಕಾಲೇಜಿನ ಪ್ರಥಮ ಪದವಿಪೂರ್ವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಆಯೋಜಿಸಿದ ಓರಿಯೆಂಟೇಷನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉತ್ತಮ ಶಿಕ್ಷಣವು ಉತ್ತಮ ನಾಗರಿಕರು ಮತ್ತು ಮಾನವೀಯತೆಯ ಯುವ ಮನಸ್ಸುಗಳನ್ನು ರೂಪಿಸಬೇಕು. ಶ್ರದ್ಧೆ ಕಲಿಕೆಗೆ ದಾರಿದೀಪ. ಶಿಸ್ತುಬದ್ಧ ಕಲಿಕೆಯು ಶಿಸ್ತುಬದ್ಧ ಜೀವನವನ್ನು ರೂಪಿಸುತ್ತದೆ. ಖಚಿತ ಗುರಿ ಇರುವಾಗ ಒತ್ತಡ ಸಹಜ. ಈ ಒತ್ತಡವೇ ನಮಗೆ ಶ್ರೇಯಸ್ಸು ತರುತ್ತದೆ ಎಂದರು.
ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಪ್ರಾಸ್ತಾವಿಕ ಭಾಷಣ ಮಾಡಿ, ವೈದ್ಯರು, ಎಂಜಿನಿಯರ್ ಆಗುವ ಕನಸಿನೊಂದಿಗೆ ಸಮಾಜಸೇವಾ ಮನೋಭಾವವನ್ನು ಹೊಂದಿರಬೇಕು. ಪೋಷಕರು ತಮ್ಮ ಮಕ್ಕಳನ್ನು ಸ್ವತಂತ್ರವಾಗಿ ಬೆಳೆಯಲು ಬಿಡಬೇಕು ಎಂದವರು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಎಕ್ಸ್ಪರ್ಟ್ ಮೂಲಮಂತ್ರದೊಂದಿಗೆ ಕಾಲೇಜಿನ ಪ್ರತಿಜ್ಞೆಯನ್ನು ಬೋಧಿಸಿದರು.
ಉಪಪ್ರಾಂಶುಪಾಲೆ(ಆಡಳಿತ) ಧೃತಿ ವಿ. ಹೆಗ್ಡೆ ಕಾಲೇಜಿನ ಸೌಲಭ್ಯ ಮತ್ತು ನಿಯಮಾವಳಿಗಳನ್ನು ವಿವರಿಸಿದರು.
ಉಪಪ್ರಾಂಶುಪಾಲ(ಶೈಕ್ಷಣಿಕ) ಸುಬ್ರಹ್ಮಣ್ಯ ಉಡುಪ ಕಾಲೇಜಿನ ಶೈಕ್ಷಣಿಕ ಯೋಜನೆಗಳನ್ನು ತಿಳಿಸಿದರು. ಎಐಸಿಇ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಉಪಸ್ಥಿತರಿದ್ದರು.
ಚೀಫ್ ರೆಸಿಡೆಂಟ್ ಮೆಂಟರ್ ಅನಿತಾ ಪಿ. ಶೆಟ್ಟಿ ಸ್ವಾಗತಿಸಿ, ವಂದಿಸಿದರು.