
ಸಪ್ತ ನಿಯೋಗದಲ್ಲಿ ನಾನು ಇರುವುದು ಹೆಮ್ಮೆಯ ವಿಚಾರ: ಸಂಸದ ಕ್ಯಾ. ಬ್ರಿಜೇಶ್ ಚೌಟ
ಮಂಗಳೂರು: ಪಾಕಿಸ್ಥಾನದ ಮುಖವಾಡ ವಿಶ್ವದೆದುರು ಕಳಚಲು ಸಪ್ತ ನಿಯೋಗ ಸಿದ್ದವಾಗಿದ್ದು, ಈ ನಿಯೋಗವು ವಿದೇಶಗಳಿಗೆ ಭೇಟಿ ನೀಡಲಿದೆ. 7 ಹಿರಿಯ ಸಂದಸರ ನೇತೃತ್ವದಲ್ಲಿ ವಿವಿಧ ದೇಶಗಳಿಗೆ ನಿಯೋಗ ತೆರಳಲಿದ್ದು, ಈ ನಿಯೋಗದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೂಡ ತೆರಳಲಿರುವರು.
ಈ ನಿಯೋಗದ ನೇತೃತ್ವವನ್ನು ಡಿಎಂಕೆ ಸಂಸದೆ ಕನಿಮೋಳಿ ವಹಿಸಲಿದ್ದು, ಈ ಕುರಿತು ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರತಿಕ್ರಿಯೆ ನೀಡಿದ್ದಾರೆ.
ರಷ್ಯಾ, ಸ್ಪೇನ್, ಗ್ರೀಸ್, ಸ್ಲೊವೇನಿಯಾ, ಲಟ್ವಿಯಾ ದೇಶಗಳಿಗೆ ತೆರಳಲಿದ್ದೆವೆ. ನನಗೆ ಇದೊಂದು ಹೆಮ್ಮೆಯ ಕ್ಷಣವಾಗಿದೆ. ನಾನು ಭಾರತವನ್ನು ವಿಶ್ವ ವೇದಿಕೆಯಲ್ಲಿ ಸಂಸದನಾಗಿ, ಪೂರ್ವ ಸೈನಿಕನಾಗಿ ಪ್ರತಿನಿಧಿಸುತ್ತಿದ್ದೇನೆ. ಒಬ್ಬ ಸೈನಿಕನಾಗಿ ಭಾರತದ ಸೇನಾಪಡೆಗಳು ಅಪರೇಷನ್ ಸಿಂದೂರ್ನಲ್ಲಿ ನಡೆದುಕೊಂಡ ರೀತಿಯ ಬಗ್ಗೆ ಹೆಮ್ಮೆಯಿದೆ ಎಂದು ತಿಳಿಸಿದರು.
ಕಳೆದ ಹಲವಾರು ದಶಕಗಳಿಂದ ಪಾಕಿಸ್ತಾನ ಭಯೋತ್ಪದನೆಗೆ ಪ್ರೋತ್ಸಾಹ ನೀಡುತ್ತಿದೆ. ಕಾಶ್ಮೀರದಲ್ಲಿ ಉಗ್ರವಾದ ಚಟುವಟಿಕೆಗೆ ಸಹಕಾರ ಪ್ರೋತ್ಸಹ ನೀಡುತ್ತಿದೆ. ಈ ವಿಚಾರ ಇಡೀ ಜಗತ್ತಿಗೆ ಈ ವಿಷಯ ಗೊತ್ತಾಗಿದೆ. ಭಯೋತ್ಪದನೆ ಪ್ರೋತ್ಸಹಿಸುತ್ತಿರುವ ಪಾಕಿಸ್ತಾನದ ನೀತಿಯನ್ನು ಇಡೀ ಜಗತ್ತಿಗೆ ಮನದಟ್ಟು ಮಾಡಬೇಕಾಗಿದೆ. ಈ ವಿಷಯ ತಳಿಸುವ ಪ್ರಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ ಎಂದು ಹೇಳಿದರು.
ವಿಶ್ವದೆದುರು ಪಾಕಿಸ್ತಾನದ ಮುಖವಾಡ ಕಳಚಲು ಸಪ್ತ ನಿಯೋಗ ರಚಿಸಿಸಲಾಗಿದೆ. ಸಂಸದರು ಹಾಗೂ ರಾಜತಾಂತ್ರಿಕರು ಇರುವ ೭ ತಂಡ ರಚಿಸಲಾಗಿದೆ. ಈ ನಿಯೋಗ ವಿಶ್ವದ ವಿವಿಧ ದೇಶಗಳಿಗೆ ಭೇಟಿ ನೀಡಿಲಿದೆ. ಈ ನಿಯೋಗದಲ್ಲಿ ನನಗೂ ಸ್ಥಾನ ನೀಡಲಾಗಿದೆ. ನಾನು ಅತ್ಯಂತ ಉತ್ಸುಕನಾಗಿದ್ದೇನೆ. ಈ ಹೊಸ ಭಾರತದ ಶಕ್ತಿಯನ್ನು, ಉಗ್ರವಾದದ ವಿರುದ್ಧ ಈ ಹೊಸ ಭಾರತ ಹೇಗೆ ಎದೆಯೊಡ್ಡಿ ನಿಲ್ಲಲಿದೆ. ಉಗ್ರವಾದದ ವಿರುದ್ಧ ಜಿರೋ ಟಾಲರೆನ್ಸ್ ಎಂಬ ಭಾರತದ ನಿಲುವು ಹೇಳಬೇಕಿದೆ ಎಂದರು.
ಪ್ರಧಾನಿ ಮೋದಿ ಅವರ ನಾಯಕತ್ವವನ್ನು ವಿಶ್ವಕ್ಕೆ ತಿಳಿಸುವ ಅವಕಾಶ ಸಿಕ್ಕಿದೆ. ಹೊಸ ಭಾರತದ ಸೈನ್ಯದ ಪರಾಕ್ರಮ ವಿಶ್ವಕ್ಕೆ ತಿಳಿಸುವ ಭಾಗ್ಯ ನನ್ನದಾಗಿದೆ. ನಿಯೋಗ ರಷ್ಯಾಕ್ಕೆ ಹೋಗುತ್ತಿರುವುದು ಖುಷಿಯಿದೆ. ಭಾರತ ಮತ್ತು ರಷ್ಯಾ ಈ ಹಿಂದಿನಿಂದಲೂ ಮಿಲಿಟರಿ ಸಂಬಂಧ ಹೊಂದಿದೆ ಎಂದು ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.