
ಕೆಲ್ಲಪುತ್ತಿಗೆ ಹಾಲು ಉತ್ಪಾದಕರ ಸಂಘದ ಕಟ್ಟಡ ನಿಮಾ೯ಣಕ್ಕೆ ಧಮ೯ಸ್ಥಳ ಯೋಜನೆಯಿಂದ ರೂ. 2 ಲಕ್ಷದ ಚೆಕ್
Saturday, May 24, 2025
ಮೂಡುಬಿದಿರೆ: ಕೆಲ್ಲಪುತ್ತಿಗೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಧರ್ಮಸ್ಥಳ ಯೋಜನೆಯ ವತಿಯಿಂದ ಕಟ್ಟಡ ನಿರ್ಮಾಣಕ್ಕೆ 2 ಲಕ್ಷ ರೂ. ಚೆಕ್ನ್ನು ಶುಕ್ರವಾರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಧನಂಜಯ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಸಂಘದ ಅಧ್ಯಕ್ಷ ಪ್ರಶಾಂತ್ ಎಸ್. ಅಮೀನ್, ಉಪಾಧ್ಯಕ್ಷ ಸುರೇಂದ್ರ ಕುಮಾರ್ ಅಜ್ರಿ ಹಾಗೂ ನಿರ್ದೇಶಕರುಗಳು, ಮೇಲ್ವಿಚಾರಕರಾದ ಯಶೋದ ಕೆ., ಸೇವಾ ಪ್ರತಿನಿಧಿ ಆಶಾ, ಸಂಘದ ಕಾರ್ಯದರ್ಶಿ ಭರತ್ ಕುಮಾರ್ ಉಪಸ್ಥಿತರಿದ್ದರು.