ಸ್ನಾನ ಘಟ್ಟಕ್ಕೆ ಭಕ್ತರು ಇಳಿಯದಂತೆ ಆದೇಶ

ಸ್ನಾನ ಘಟ್ಟಕ್ಕೆ ಭಕ್ತರು ಇಳಿಯದಂತೆ ಆದೇಶ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣದ ಕುಮಾರಧಾರ ಸ್ನಾನ ಘಟ್ಟಕ್ಕೆ ಕಡಬ ತಹಶಿಲ್ದಾರ್  ಪ್ರಭಾಕರ ಖಜೂರೆ  ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಮೇ.27 ರಂದು ಭೇಟಿ ನೀಡಿದ್ದು  ವಿಪರೀತ ಮಳೆ ಬರುತ್ತಿರುವ ಕಾರಣ  ಸ್ನಾನ ಘಟ್ಟ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ  ಸ್ನಾನ ಘಟ್ಟ ಕ್ಕೆ ಭಕ್ತರು ಇಳಿಯದಂತೆ ತಹಶಿಲ್ದಾರ್ ಆದೇಶ ಮಾಡಿದ್ದಾರೆ.

ಹೊಸ ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು ಅದರ ಪರಿಶೀಲನೆ ಮಾಡಿದ್ದಾರೆ. ಅಲ್ಲದೆ ಹೊಸದಾಗಿ ನಿರ್ಮಾಣ ಆಗುತ್ತಿರುವ ಎತ್ತರಿಸಿದ ಸಂಪರ್ಕ ರಸ್ತೆ ಕಾಮಗಾರಿ  ಪರಿಶೀಲಿಸಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ತಿಳಿದು ಬಂದಿದೆ. ಈ ಸಂದರ್ಭದಲ್ಲಿ ದೇವಸ್ಥಾನ ಇಂಜಿನಿಯರ್ ಉದಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article