
ಶಾಲಾ ಮಕ್ಕಳು ಬೆಳೆಸಿದ ತರಕಾರಿ ಪುನಸ್ಚೇತನ ಕೇಂದ್ರಕ್ಕೆ ಕೊಡುಗೆ
Saturday, May 24, 2025
ಉಜಿರೆ: ಬೆಳ್ತಂಗಡಿ ತಾಲೂಕು ಕುತ್ಲೂರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ತಂಡ ಮತ್ತು ವಿದ್ಯಾರ್ಥಿಗಳು ತಮ್ಮ ಶಾಲಾ ಕೈತೋಟದಲ್ಲಿ ಬೆಳೆಸಿದ ಸಾವಯವ ತರಕಾರಿಯನ್ನು ಶಾಲಾ ಉಸ್ತುವಾರಿ ಸಮಿತಿಯ ಅಧ್ಯಕ್ಷ ರಾಮಚಂದ್ರ ಭಟ್ ಮತ್ತು ವಿದ್ಯಾರ್ಥಿ ಚಿರಂಜೀವಿ ಸೌತಡ್ಕದ ಬೆನ್ನುಮೂಳೆ ಮುರಿತಕ್ಕೊಳಗಾದವರ ಪುನಸ್ಚೇತನ ಕೇಂದ್ರ ‘ಸೇವಾಧಾಮ’ಕ್ಕೆ ಕೊಡುಗೆಯಾಗಿ ಹಸ್ತಾಂತರಿಸಿದರು.
ಸೇವಾಧಾಮದ ಸಂಸ್ಥಾಪಕ ವಿನಾಯಕ ರಾವ್ ಮತ್ತು ಸಿಬ್ಬಂದಿ ಚೇತನ್ ಅದನ್ನು ಸ್ವೀಕರಿಸಿ ವಿದ್ಯಾರ್ಥಿಗಳ ಸೇವಾ ಮನೋಭಾವಕ್ಕೆ ಕೃತಜ್ಞತೆ ಸಲ್ಲಿಸಿದರು.