
ಸುನೀಲ್ ಕುಮಾರ್ ವಿದ್ಯುತ್ ದರ ಏರಿಕೆ ಪಿತಾಮಹ: ಶುಭದ ರಾವ್
Monday, June 23, 2025
ಕಾರ್ಕಳ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಾರಂಭವಾದ ಅಕ್ರಮ ಸಕ್ರಮ ಅದನ್ನು ತಿರಸ್ಕರಿಸಿದ್ದು, ನಿಮ್ಮ ಸರ್ಕಾರ ಆಶ್ರಯ ಯೋಜನೆ ಕಾಂಗ್ರೆಸ್ ಕೊಡುಗೆ, ಪಿಂಚಣಿ ಯೋಜನೆ ರದ್ದು ಆದೇಶ ಬಿಜೆಪಿ ಸರ್ಕಾರದ್ದು, ಅದಲ್ಲದೆ ಪ್ರತಿ ಕಿ. ವ್ಯಾಟ್ಗೆ 50 ರೂ.ವನ್ನು 180ಕ್ಕೆ ಏರಿಸಿದ್ದು ನೀವು, ಸುನಿಲ್ ಕುಮಾರ್ ಅವರೆ ನೀವು ವಿದ್ಯುತ್ ದರ ಏರಿಕೆ ಪಿತಾಮಹ ಆಗಿದ್ದೀರಿ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಲೇವಡಿ ಮಾಡಿದರು.
ಅವರು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಶಾಸಕ ಸುನೀಲ್ ಕುಮಾರ್ಧ್ವರ ಸುಳ್ಳು ಆರೋಪ ಹಾಗೂ ಅವರ ವೈಫಲ್ಯ ಮತ್ತು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಯುವ ಮೋರ್ಚ ಮುಖಂಡನ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಮುಖಂಡ ಮುನಿಯಲು ಉದಯ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಸೋಮವಾರ ಕಾರ್ಕಳ ಬಸ್ ನಿಲ್ದಾಣದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.
ಬಿಜೆಪಿಯ ಶಾಸಕರಾದ ನೀವು ಬಿಜೆಪಿ ಅಧ್ಯಕ್ಷರು ಇರುವ ಬಿಜೆಪಿ ಆಡಳಿತದ ಪಂಚಾಯತ್ನಲ್ಲಿ ಬಿಜೆಪಿ ಅಧ್ಯಕ್ಷರು, ಬಿಜೆಪಿ ಸದಸ್ಯರೇ ಪ್ರತಿಭಟನೆ ಮಾಡುತ್ತಿರುವುದು ನಿಮಗೆ ನಾಚಿಗೆಯಾಗಬೇಕು ಕಾರ್ಕಳದಲ್ಲಿ ಪಲಾನುಭವಿಗಳ ಲೆಕ್ಕ ನೋಡಿ ನಿಮಗೆ ಹೊಟ್ಟೆ ಉರಿಯಾಗುತಿದೆ. ಈ ಯೋಜನೆಯ ಲಾಭ ಕಾಂಗ್ರೆಸ್ಗೆ ಆಗುತ್ತದೆ ಎಂಬ ಮುಂದಿನ ಚುನಾವಣೆ ಭಯ ನಿಮಲ್ಲಿ ಆವರಿಸಿ ಸಂಧ್ಯಾ ಸುರಕ್ಷಾ, ವೃದ್ಧಪ್ಯಾ ವೇತನ 9/11 ಬಗ್ಗೆ ಸುಳ್ಳು ಹೇಳಿ ವೃದ್ಧರನ್ನು ಆಶಕ್ತರನ್ನು ಪಂಚಾಯತ್ ಕಚೇರಿಗೆ ಅಲೆದಾಡಿಸುವ ಶಾಪ ನಿಮಗೆ ತಟ್ಟದೆ ಇರುವುದಿಲ್ಲ ಎಂದರು.
ಮುನಿಯಲು ಉದಯ್ ಶೆಟ್ಟಿ ಮಾತನಾಡಿ, ಕಾರ್ಕಳ ಶಾಸಕರು ರಾಜ್ಯ ಸರಕಾರದ ಮೇಲೆ ಕೆಲವು ಸುಳ್ಳು ಆರೋಪಗಳನ್ನು ಹೊರಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ ಆದರೆ ಅವರು ಹೊರಿಸಿರುವ ಅರೋಪಗಳಿಗೆ ಅವರ ಬಿಜೆಪಿ ಸರಕಾರ ಹೊರಡಿಸಿದ ಆದೇಶಗಳೇ ಕಾರಣವಾಗಿದೆ ಆದರೆ ತಮ್ಮ ತಪ್ಪನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ ಆದರೆ ಕಾಂಗ್ರೆಸ್ ಎಲ್ಲಾ ಅರೋಪಗಳಿಗೆ ಪ್ರತಿಭಟನಾ ಸಭೆಯಲ್ಲಿ ದಾಖಲೆ ಸಹಿತ ಉತ್ತರ ನೀಡಿದೆ, ಎಂದ ಅವರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಯುವ ಮೋರ್ಚಾ ಮುಖಂಡನಿಗೆ ತನ್ನ ಅಧಿಕಾರ ಬಳಸಿ ಆಶ್ರಯ ನೀಡುವ ಕೆಲಸ ಮಾಡುತಿದ್ದಾರೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ ದೇವಾಡಿಗ, ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಲಿಕ್ ಕಾಬೆಟ್ಟು, ಪುರಸಭಾ ಸದಸ್ಯ ಉದ್ಯಮಿ ವಿವೇಕಾನಂದ ಶೆಣೈ, ಯೂತ್ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ, ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ಚಂದ್ರಪಾಲ್ ನಕ್ರೆ, ಕಾರ್ಕಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನುಭಾಸ್ಕರ್, ಕಾರ್ಕಳ ತಾಲೂಕು ಸೇವಾದಳ ಅಧ್ಯಕ್ಷ ಅಬ್ದುಲ್ಲ ಪುಲ್ಕೆರಿ, ಹಿರಿಯ ಕಾಂಗ್ರೆಸ್ ಮುಖಂಡ ಸುಂದರ ಸಮಗಾರ, ಕೆಎಂಫ್ ನಿರ್ದೇಶಕ ಮಾಜಿ ತಾಲೂಕು ಪಂಚಾಯತ್ ಸದಸ್ಯ ಸುಧಾಕರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಮ್.ಪಿ. ಮೊಯಿದಿನಬ್ಬ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ್ ಕೋಟ್ಯಾನ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಉದಯ್ ಶೆಟ್ಟಿ ಕುಕ್ಕುಂದೂರ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಾರ್ಜ್ ಕಾಸ್ಟಲಿನೋ, ಕಾಂಗ್ರೆಸ್ ಮುಖಂಡ ಪ್ರಭಾಕರ್ ಬಂಗೇರ ಪುರಸಭೆ ಮಾಜಿ ಅಧ್ಯಕ್ಷರು ಸದಸ್ಯರುಗಳಾದ ಪ್ರತಿಮಾ ರಾಣೇ, ರೆಹಮತ್ ಏನ್ ಶೇಖ್, ಮಾಜಿ ಅಧ್ಯಕ್ಷ ಸುಬಿತ್ ಎನ್.ಆರ್., ವಿಪಕ್ಷ ನಾಯಕ ಅಷ್ಪಕ್ ಅಹ್ಮದ್, ಸದಸ್ಯರುಗಳಾದ ವಿನ್ನಿ ಬೋಲ್ಡ್ ಮೆಂಡೋನ್ಸ, ಹರೀಶ್ ದೇವಾಡಿಗ, ಸೋಮನಾಥ್ ನಾಯ್ಕ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಪ್ರೀತ್ ಶೆಟ್ಟಿ ಕೇದಿಂಜೆ, ಕುಕ್ಕುಂದೂರು ಪಂಚಾಯತ್ ಸದಸ್ಯ ರೆಹಮತುಲ್ಲಾ ಕಾಂಗ್ರೆಸ್ ಮುಖಂಡರುಗಳಾದ ರಹೀಮ್ ಎಣ್ಣೆಹೊಳೆ, ರೀನಾ ಡಿಸೋಜ, ನವೀನ್ ಅಡ್ಯಾಂತಾಯ, ಜೋಕಿಮ್ ಪಿಂಟೋ, ಆರಿಫ್ ಕಲ್ಲೊಟ್ಟೆ, ಪಕ್ಷದ ವಿವಿಧ ಘಟಕದ ಹಾಗೂ ಗ್ರಾಮೀಣ ಸಮಿತಿಯ ಅಧ್ಯಕ್ಷರು ಪಧಾದಿಕಾರಿಗಳು, ಬೂತ್ ಅಧ್ಯಕ್ಷರು, ಚುನಾಯಿತ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.