‘ಪೊಲೀಸರು ಸತ್ಯದ ಪರವಾಗಿ ಮತ್ತು ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಾರೆ’: ಪೊಲೀಸ್ ಕಮಿಷನರ್

‘ಪೊಲೀಸರು ಸತ್ಯದ ಪರವಾಗಿ ಮತ್ತು ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಾರೆ’: ಪೊಲೀಸ್ ಕಮಿಷನರ್


ಮಂಗಳೂರು:  ದ್ವೇಷ ಭಾಷಣ ಮಾಡುವವರಿಗೆ ಸುಲಭವಾಗಿ ಜಾಮೀನು ದೊರೆಯುತ್ತದೆ ಎಂಬ ಅನುಮಾನ, ಆತಂಕ ಸಾರ್ವಜನಿಕರಿಗೆ ಬೇಡ. ದ್ವೇಷ ಭಾಷಣ ಮಾಡುವ ಸ್ಟೇಜ್ನಿಂದಲೇ ಅಂತಹವರನ್ನು ಎಳೆದುಕೊಂಡರು ಬರಲು ಪೊಲೀಸರಿಗೆ ಯಾವುದೇ ಸಮಸ್ಯೆ ಇಲ್ಲ. ಸತ್ಯದ ಪರವಾಗಿ ಮತ್ತು ಪಾರದರ್ಶಕವಾಗಿ ಪೊಲೀಸರು ಕಾರ್ಯ ನಿರ್ವಹಿಸುತ್ತಾರೆ. ಈ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಸಂದೇಹ ಬೇಡ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬಜ್ಪೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಹಾಗೂ ಕುಡುಪುವಿನಲ್ಲಿ ನಡೆದ ಅಶ್ರಫ್ ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ನಡೆಸಿರುವ ತನಿಖೆಯ ಸಮಗ್ರ ವಿವರ ನೀಡಿ ಅವರು ಮಾತನಾಡಿದರು. 

ಕಾನೂನಿನಡಿ ದ್ವೇಷ ಭಾಷಣಕ್ಕೆ ಸಂಬಂಧಿಸಿ ನ್ಯಾಯಾಲಯದಿಂದ ಜಾಮೀನು ಸಿಗಬಹುದು. ಆದರೆ, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವ ಪ್ರಕರಣದಡಿ ಈ ರಿತಿ ದ್ವೇಷ ಭಾಷಣಗಳನ್ನು ಪುನಾರವರ್ತನೆ ಮಾಡುವವರಿಗೂ ಕಾನೂನಿನಡಿ ಸೂಕ್ತ ಕ್ರಮ ಆಗುತ್ತದೆ. ಪ್ರಜಾಪ್ರಭುತ್ವದಲ್ಲಿ ಮಾತನಾಡಲು ಅವಕಾಶ ಇದೆ. ಆದರೆ ಮಾತು ಹಾದಿ ತಪ್ಪಿದರೆ ಅದಕ್ಕೆ ಸೂಕ್ತವಾದ ಕ್ರಮವೂ ಭಾರತೀಯ ದಂಡ ಸಂಹಿತೆಯಲ್ಲಿದೆ ಎಂದರು.

ಬಜ್ಪೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಹಾಗೂ ಕುಡುಪುವಿನ ಅಶ್ರಫ್ ಸಾಮೂಹಿಕ ಹತ್ಯೆ ಪ್ರಕರಣಗಳಲ್ಲಿ ಪೊಲೀಸರು ಘಟನೆಯ ವೈಜ್ಞಾನಿಕ ಸಾಕ್ಷ್ಯಾಧಾರದಲ್ಲಿಯೇ ತನಿಖೆ ನಡೆಸಿದ್ದಾರೆ. ಯಾವುದೇ ರೀತಿಯ ಸಾಕ್ಷ್ಯಾಧಾಗಳಿದ್ದಲ್ಲಿ ಅದನ್ನು ನೇರವಾಗಿ ಒದಗಿಸಿ. ಸುಹಾಸ್ ಶೆಟ್ಟಿ ಪ್ರಕರಣ ಸದ್ಯ ಎನ್‌ಐಎಗೆ ವಹಿಸಲಾಗಿದ್ದು, ಅಶ್ರಫ್ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ. 

ಈ ಪ್ರಕರಣದಲ್ಲಿ ಈಗಾಗಲೇ 100ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಹಾಗಾಗಿ ಸಾರ್ವಜನಿಕರಿಗೆ ಯಾವುದೇ ರೀತಿಯ ಅನುಮಾನ, ಸಂಶಯ ಬೇಡ. ಪೊಲೀಸರ ತನಿಖೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವುದು ಬಿಟ್ಟು, ಸಾಕ್ಷ್ಯಾಧಾರಗಳಿದ್ದಲ್ಲಿ ನೇರವಾಗಿ ನಮಗೆ ತಂದು ಕೊಡಿ. ಕಾನೂನಿಗಿಂತ ಯಾರೂ ಮೇಲಲ್ಲ. ನಾವು ಯಾವುದೇ ಪುರಾವೆಗಳನ್ನು ಕಡೆಗಣಿಸುವುದಿಲ್ಲ. ಆದರೆ ತನಿಖೆಗೆ ದಿಕ್ಕು ತಪ್ಪಿಸುವ ರೀತಿಯಲ್ಲಿ, ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುವ ಕಾರ್ಯವನ್ನು ಯಾರಾದರೂ ನಡೆಸಿದರೂ ಅವರೂ ಕಾನೂನಿನ ಪ್ರಕಾರ ಆರೋಪಿಗಳಾಗುತ್ತಾರೆ. ಪೊಲೀಸರು ಪಾರದರ್ಶಕವಾಗಿ ಈ ಎರಡೂ ಪ್ರಕರಣಗಳಲ್ಲಿ ಕ್ರಮಗಳನ್ನು ಕೈಗೊಂಡಿದ್ದಾರೆ. ಇತರ ಪ್ರಕರಣಗಳಲ್ಲಿಯೂ ಪೊಲೀಸರು ಕಾನೂನು ಬದ್ಧವಾಗಿಯೇ ಕ್ರಮ ವಹಿಸುತ್ತಾರೆ. ಯಾವುದೇ ಅಮಾಕರಿಗೆ ಸಮಸ್ಯೆ ಆಗದು. ಹಾಗೆಯೇ ತಪ್ಪಿತಸ್ಥರನ್ನು ಬಿಡಲಾಗದು ಎಂದು ಕಮಿಷನರ್ ಸುಧೀರ್ ಶೆಟ್ಟಿ ಸ್ಪಷ್ಟಪಡಿಸಿದರು. ಸುಹಾಶ್ ಶೆಟ್ಟಿ ಪ್ರಕರಣದಲ್ಲಿಯೂ ಮೂರ್ನಾಲ್ಕು ರೀತಿಯ ಅನುಮಾನಗಳು ಸಾಮಾಜಿಕ ವಲಯದಿಂದ ವ್ಯಕ್ತವಾಗಿತ್ತು. ಸ್ಥಳವನ್ನು ನಿಗದಿಪಡಿಸಿಕೊಂಡು ಪೂರ್ವನಿಗದಿತವಾಗಿ ಯೋಜನೆ ರೂಪಿಸಲಾಗಿತ್ತು. ಆರೋಪಿಗಳು ತಪ್ಪಿಸಿಕೊಂಡು ಹೋಗುವಲ್ಲಿ ಮಹಿಳೆಯರಿಬ್ಬರು ಸಹಕರಿಸಿದ್ದು, ಅ ಅವರನ್ನು ತನಿಖೆಗೊಳಪಡಿಸಿಲ್ಲ. ಸಿಸಿಟಿವಿಯಲ್ಲಿ ನೋಡುವಾಗ 50ಕ್ಕೂ ಅಧಿಕ ಜನರು ಸೇರಿದ್ದು ಅವರನ್ನೆಲ್ಲಾ ಬಂಧಿಸಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಆ ಪ್ರಕರಣದಲ್ಲಿ ಸುಹಾಸ್ ಶೆಟ್ಟಿಯ ಕಾರು ಘಟನಾ ಸ್ಥಳದಲ್ಲಿ ಹಾದು ಹೋಗುವಾಗಿನಿಂದಿನ, ಆ ಜಾಗದಲ್ಲಿ ಅದಕ್ಕೂ ಸ್ವಲ್ಪ ಹೊತ್ತಿನ ಮುಂಚೆ ನಡೆದ ಘಟನೆಯ ವೇಳೆ ನಡೆದಿದ್ದ ಅಪಘಾತ ಪ್ರಕರಣ ವೀಕ್ಷಿಸಲು ಕುತೂಹಲದಿಂದ ಸೇರಿದ್ದವರು, ಸುಹಾಸ್ ಶೆಟ್ಟಿಯನ್ನು ಫಾಲೋ ಮಾಡಿಕೊಂಡು ಬಂದ ವಾಹನ ಸೇರಿದಂತೆ ಎಲ್ಲಾ ರೀತಿಯ ಸಾಕ್ಷ್ಯಗಳನ್ನು ಪರಿಗಣಿಸಿ, ವಿಚಾರಣೆಗೊಳಪಡಿಸಲಾಗಿದೆ. ಅನುಮಾನಗಳ ಬಗ್ಗೆಯೂ ಸಂಬಂಧಪಟ್ಟವರಿಗೆ ವೀಡಿಯೋ ದಾಖಲೆಗಳ ಮೂಲಕ ಮಾಹಿತಿ ಒದಗಿಸಲಾಗಿದೆ.

ಅಶ್ರಫ್ ಕೊಲೆ ಪ್ರಕರಣದಲ್ಲಿಯೂ ಪೊಲೀಸಗೆ ಪ್ರಾಥಮಿಕಾಗಿ ದೊರಕಿದ ಮೃತನ ಫೋಟೋದ ಬಳಿ ಇದ್ದ ಆರೋಪಿಗಳ ಚಪ್ಪಲಿ ಹಾಗೂ ಶೂಗಳನ್ನು ಆಧರಿಸಿ ಪತ್ತೆ ಹಚ್ಚುವ ಕಾರ್ಯ ಪೊಲೀಸರಿಂದ ಆಗಿದೆ. ಈ ಪ್ರಕರಣದಲ್ಲಿಯೂ ಕೆಲ ಆರೋಪಿಗಳು ಮೃತಪಟ್ಟ ವ್ಯಕ್ತಿಗೆ ಹಲ್ಲೆ ನಡೆಸುತ್ತಿದ್ದ ವೇಳೆ ದೂರದಲ್ಲಿ ಕ್ರಿಕೆಟ್ ಆಟ ನಡೆಯುತ್ತಿತ್ತು. ಆದರೆ ಅಲ್ಲಿ ಸೇರಿದ್ದವರನ್ನು ಆರೋಪಿಗಳೆಂದು ಪರಿಗಣಿಸಲು ಆಗುವುದಿಲ್ಲ. ಪ್ರಮುಖ ಆರೋಪಿಗಳ ಹೇಳಿಕೆಯ ಆಧಾರದಲ್ಲಿ ತನಿಖೆ ಆಗಿದೆ. ಆರಂಭದಲ್ಲಿ ಪೊಲೀಸರಿಂದ ಆಗಿರುವ ಲೋಪಕ್ಕೆ ಸಂಬಂಧಿಸಿ ಪೊಲೀಸರ ಮೇಲೂ ಕ್ರಮ ಆಗಿದೆ. ಹಾಗಿದ್ದರೂ ಪ್ರಕರಣವನ್ನು ಸಂಪೂರ್ಣವಾಗಿ ವೈಜ್ಞಾನಿಕ ಸಾಕ್ಷ್ಯಗಳ ಆಧಾರದಲ್ಲಿಯೇ ತನಿಖೆ ನಡೆಸಲಾಗುತ್ತಿದೆ. ನಾನು ಇನ್ನೂ ಎರಡು ದಿನ ಕಚೇರಿಯಲ್ಲೇ ಇರುತ್ತೇನೆ. ಯಾರೇ ಈ ಪ್ರಕರಣದ ಬಗ್ಗೆ ಸಾಕ್ಷ್ಯ ಇದ್ದರೆ ತಂದು ಒದಗಿಸಿ ಎಂದು ಹೇಳಿದರು. 

ಸಾಮಾಜಿಕ ಜಾಲತಾಣಗಳ ಪೋಸ್ಡ್‌ಗಳ ಬಗ್ಗೆಯೂ ಸ್ಪಷ್ಟ ಸಂದೇಶ ನೀಡಿದ ಅವರು,  ಯಾವುದೇ ರೀತಿಯ ಸಾಕ್ಷ್ಯವಿಲ್ಲದೆ ಪೊಲೀಸರ ಕಾರ್ಯಾಚರಣೆ ಬಗ್ಗೆ ಆಕ್ಷೇಪ, ಅನುಮಾನ ವ್ಯಕ್ತಪಡಿಸಿದಾಗ ನೋಟೀಸು ನೀಡಿ ವಿಚಾರಣೆ ನಡೆಸಲಾಗುತ್ತದೆ. ಸಾಕ್ಷ್ಯ ಇದ್ದಲ್ಲಿ ನೀಡಬೇಕು. ಅದು ಬಿಟ್ಟು ಯಾವುದೋ ಅನುಮಾನದಲ್ಲಿ ಹೇಳಿದರೆ ಕಾನೂನಿನಲ್ಲಿ ಅದಕ್ಕೆ ಅವಕಾಶ ಇರುವುದಿಲ್ಲ. ಮಂಗಳೂರಿನ ಎಲ್ಲ ನಾಗರಿಕರ ಸುರಕ್ಷತೆಯನ್ನು ಕಾಪಾಡುವ ಜತೆಗೆ ನ್ಯಾಯ ಒದಗಿಸುವುದು ಪೊಲೀಸರಾದ ನಮ್ಮ ಕರ್ತವ್ಯ. ಅದನ್ನು ನಾವು ನಿರ್ವಹಿಸುತ್ತೇವೆ ಎಂದರು. 

ಈ ಸಂದರ್ಭದಲ್ಲಿ ಡಿಸಿಪಿಗಳಾದ ರವಿಶಂಕರ್, ಸಿದ್ಧಾರ್ಥ್ ಗೋಯಲ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article