
ಕಾಂಗ್ರೆಸ್ನ ಜನವಿರೋಧಿ ನೀತಿಯ ವಿರುದ್ಧ ಪಾಲಡ್ಕ ಪಂಚಾಯತ್ನಲ್ಲಿ ಬಿಜೆಪಿಯಿಂದ ಪ್ರತಿಭಟನೆ
Monday, June 23, 2025
ಮೂಡುಬಿದಿರೆ: ಗ್ಯಾರಂಟಿಗಳ ಹೆಸರಲ್ಲಿ ಅಧಿಕಾರಕ್ಕೆ ಬಂದು ಜನರ ಕಣ್ಣಿಗೆ ಮಣ್ಣೆರಚಿ ಅನೇಕ ಜನವಿರೋಧಿ,ಹಿಂದೂ ವಿರೋಧಿ ನೀತಿಗಳ ಮೂಲಕ ರಾಜ್ಯದ ಜನರಿಗೆ ಮಾರಕವಾಗಿ ಕಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಮಂಡಲವು ಅವಿಭಜಿತ ದ.ಕ., ಉಡುಪಿ ಜಿಲ್ಲೆಯ ಪಂಚಾಯತ್ಗಳಲ್ಲಿ ಪ್ರತಿಭಟನೆಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ಪಾಲಡ್ಕ ಗ್ರಾಮ ಪಂಚಾಯತ್ನ ಮುಂಬಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜನವಿರೋಧಿ ನೀತಿಯ ಬಗ್ಗೆ ಪಕ್ಷದ ಪ್ರಮುಖರು ಹಾಗೂ ಹಿರಿಯ ನ್ಯಾಯವಾದಿ ಕೆ.ಆರ್. ಪಂಡಿತ್ ಪ್ರಸ್ತಾವಿಕವಾಗಿ ಮಾತನಾಡಿದರು.
ಮುಲ್ಕಿ-ಮೂಡುಬಿದಿರೆ ಮಂಡಲ ಯುವಮೊರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್, ಮಂಡಲ ಕಾರ್ಯಕಾರಣಿ ಸದಸ್ಯ ಮೋಹನ್ ಶೆಟ್ಟಿ, ಕಡಂದಲೆ ಶಕ್ತಿಕೇಂದ್ರ ಪ್ರಮುಖ್ ಸಂತೋಷ್ ಭಂಡಾರಿ, ಪಕ್ಷದ ಪ್ರಮುಖರಾದ ಸತೀಶ್ ಆಚಾರ್ಯ ಕಡಂದಲೆ, ಚಂದ್ರಶೇಖರ ಶೆಟ್ಟಿ ಕಡಂದಲೆ, ವಿಜಯ್ ಪೂಜಾರಿ ಮುಕ್ಕಡಪು, ಪಂಚಾಯತ್ ಸದಸ್ಯರಾದ ದಿನೇಶ್ ಕಾಂಗ್ಲಾಯಿ, ಸುಖೇಶ್ ಶೆಟ್ಟಿ ಕೇಮಾರ್, ರಂಜಿತ್ ಭಂಡಾರಿ ಕಡಂದಲೆ, ಜಗದೀಶ್ ಕಲ್ಲೊಟ್ಟು, ಕಾಂತಿ ಶೆಟ್ಟಿ, ರೇಖಾ ಪೂಜಾರಿ, ಹರಿಣಿ, ಮಂಡಲ ವಿವಿಧ ಜವಾಬ್ದಾರಿಯುತ ಪದಾಧಿಕಾರಿಗಳಾದ ಜಿವಂಧರ್ ಶೆಟ್ಟಿಗಾರ್ ಬೋವಾಡಿ, ಸುದರ್ಶನ ಆಚಾರ್ಯ ಕೊಳಕೆಬೈಲು, ಬೂತ್ ಅಧ್ಯಕ್ಷ ನಾಗರಾಜ ಪೂಜಾರಿ, ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಈ ಸಂದಭ೯ದಲ್ಲಿ ಉಪಸ್ಥಿತರಿದ್ದರು.