
ಮೂಡುಬಿದಿರೆ ಲಯನ್ಸ್ ಕ್ಲಬ್ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ
ಮೂಡುಬಿದಿರೆ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಲ್ಲುಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಲಯನ್ಸ್ ಕ್ಲಬ್ ಮೂಡುಬಿದ್ರೆ ಇದರ ಜಂಟಿ ಆಶ್ರಯದಲ್ಲಿ ಜೂ.5 ರಂದು ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಹಾಗೂ ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶಾಲಾ ಮಕ್ಕಳು ಶಾಲೆಯ ವಠಾರದಲ್ಲಿ 250 ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಸಂಗನಬಸಯ್ಯ ಹಿರೇಮಠ್ ರವರು ವಹಿಸಿದ್ದರು.
ಲಯನ್ಸ್ ನಿಯೋಜಿತ ಅಧ್ಯಕ್ಷರಾದ ಲಯನ್ ಶಿವಪ್ರಸಾದ್ ಹೆಗ್ಡೆಯವರು ಪ್ರಸ್ತಾವನೆಯನ್ನು ಗೈದು ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿಯನ್ನು ನೀಡಿದರು.ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಮೂಡುಬಿದರೆ ಅಧ್ಯಕ್ಷರಾದ ಲಯನ್ ಬೋನವೆಂಚರ್ ಮ್ಯಾನೇಜಸ್, ಪುರಸಭಾ ಸದಸ್ಯರುಗಳಾದ ಲಯನ್ ಜೊಸ್ಸಿ ಮೆನೇಜಸ್ , ಲಯನ್ ಸುರೇಶ್ ಕೋಟ್ಯಾನ್, ಕಾರ್ಯದರ್ಶಿಗಳಾದ ಲಯನ್ ವಿನೋದ್ ಡೇಸಾ, ನಿಯೋಜಿತ ಕಾರ್ಯದರ್ಶಿಗಳಾದ ಲಯನ್ ಒಸ್ವಾಲ್ಡ್ ಡಿಕೋಸ್ಟಾ, ಉಪ ಪ್ರಾಂಶುಪಾಲರಾದ ಸೌಮ್ಯಶ್ರೀ, ಪ್ರಭಾರ ವಾರ್ಡನ್ ಆಶಲತಾ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಲಯನ್ ಜೋಸ್ಸಿ ಮೆನೇಜಸ್ ಅವರ ಪ್ರಾಯೋಜಕತ್ವದಲ್ಲಿ ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 619 ಅಂಕಗಳಿಸಿ ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದ ಕುಮಾರಿ ಚೈತ್ರ ಪಾಟೀಲ್ ಹಾಗೂ ಲಕ್ಕವ್ವ ತುಕ್ಕನ್ನವರ್ ರನ್ನು ತಲಾ ರೂ 5,000 ವಿದ್ಯಾರ್ಥಿ ವೇತನವನ್ನು ನೀಡಿ ಗೌರವಿಸಲಾಯಿತು.
2026 ನೇ ಸಾಲಿಗೂ ಎಸೆಸೆಲ್ಸಿಯಲ್ಲಿ ಉತ್ತಮ ಸಾಧನೆಯನ್ನು ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಪ್ರೋತ್ಸಾಹಿಸುವುದಾಗಿ ಲಯನ್ ಜೋಸ್ಸಿ ಮೆನೇಜಸ್ ಹಾಗೂ ಲಯನ್ ಸುರೇಶ್ ಕೋಟ್ಯಾನ್ ಅವರು ತಿಳಿಸಿದರು. ಅತಿಥಿಗಳನ್ನು ಪ್ರಾಧ್ಯಾಪಕರಾದ ಕಸ್ತೂರಿ ಯವರು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸುಜಯ ರವರು ನಿರ್ವಹಿಸಿ ಧನ್ಯವಾದ ವನ್ನು ಸವಿತಾ ಅವರು ನಡೆಸಿಕೊಟ್ಟರು.