ಎಸ್‌ಕೆಎಫ್ ಎಲಿಕ್ಸರ್‌ನಲ್ಲಿ ವಿಶ್ವ ಪರಿಸರ ದಿನ

ಎಸ್‌ಕೆಎಫ್ ಎಲಿಕ್ಸರ್‌ನಲ್ಲಿ ವಿಶ್ವ ಪರಿಸರ ದಿನ


ಮೂಡುಬಿದಿರೆ: ರೋಟರಿ ಕ್ಲಬ್‌ನ ಸಹಯೋಗದಲ್ಲಿ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ.ನ ನೂತನ ಕೈಗಾರಿಕಾ ಆವರಣದಲ್ಲಿ ವಿಶ್ವ ಪರಿಸರ ದಿನವನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು. 

ಮೂಡುಬಿದಿರೆ ಅರಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಮಾತನಾಡಿ ಭೂಮಿಗಾಗಿ ನಾವಲ್ಲ, ನಮಗಾಗಿ ಭೂಮಿ ಬೇಕು. ಹಾಗಾಗಿ ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಬದ್ಧರಾಗಬೇಕು. ಪ್ಲಾಸ್ಟಿಕ್ ಮರು ಬಳಕೆಯ ಮೂಲಕ ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ರೂಪಿಸಲು ಎಲ್ಲರೂ ಕೈ ಜೋಡಿಸಬೇಕು ಎಂದರು.  ಅಧ್ಯಕ್ಷತೆ ವಹಿಸಿದ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ.ನ ಆಡಳಿತ ನಿರ್ದೇಶಕ ಡಾ. ರಾಮಕೃಷ್ಣ ಆಚಾರ್ ಮಾತನಾಡಿ ಉರುಗ್ವೆಯಂತಹ ಸಣ್ಣ ದೇಶಗಳು ಪರಿಸರ ಸಂರಕ್ಷಣೆ ಮಾಡುವ ಕೆಲಸ ಜಗತ್ತಿಗೆ ಮಾದರಿಯಾಗಿದೆ. ನಮ್ಮ ದೇಶದಲ್ಲಿ ನಾಗಬನಗಳು ಮಿಯವಾಕಿಗಳಾಗಿವೆ. ಇವುಗಳನ್ನು ಸಂರಕ್ಷಿಸಿಕೊಂಡು ಹೋಗುವವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಪರಿಸರ ರಕ್ಷಣೆ ನಮ್ಮ ಬದುಕಿನ ಬದ್ಧತೆಯಾಗಬೇಕು ಎಂದರು. ಅರಣ್ಯಾಧಿಕಾರಿ ಕಿರಣ್ ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ ರವಿಪ್ರಸಾದ್ ಉಪಾಧ್ಯಾಯ, ನಿಯೋಜಿತ ಅಧ್ಯಕ್ಷ ನಾಗರಾಜ ಹೆಗ್ಡೆ, ಎಸ್‌ಕೆಎಫ್‌ನ ಸಿಇಒ ಸುಮನ್ ಮುಖರ್ಜಿ, ಎಸ್‌ಕೆಎಫ್ ಎಲಿಕ್ಸರ್‌ನ ನಿರ್ದೇಶಕರಾದ ಪ್ರಜ್ವಲ್ ಆಚಾರ್ಯ, ತೇಜಸ್ ಆಚಾರ್ಯ ಉಪಸ್ಥಿತರಿದ್ದರು. ಪಿಆರ್‌ಒ ವಿವೇಕ್ ವಲ್ಲಭ ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article