
ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ ವತಿಯಿಂದ ನೆರವು
Thursday, June 26, 2025
ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್( ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ 66ನೇ ಸೇವಾ ಯೋಜನೆಯ ಜೂನ್ ತಿಂಗಳ 2ನೇ ಯೋಜನೆಯನ್ನು ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ತಾಲೂಕಿನ ಮಂಜನಾಡಿ ಪರಿಸರದ ಕಾಂತಪ್ಪ ಪೂಜಾರಿ ಅವರಿಗೆ ನೀಡಲಾಗಿದೆ.
ಕಾಂತಪ್ಪ ಪೂಜಾರಿ ಅವರ ಮನೆಯ ಪಕ್ಕದ ಗುಡ್ಡವು ಇತ್ತೀಚೆಗೆ ಕುಸಿದು ಮನೆಯ ಮೇಲೆ ಬಿದ್ದು ಮೊಮ್ಮಕ್ಕಳು, ಪತ್ನಿ ಪ್ರಾಣ ಕಳೆದು ಕೊಂಡಿರುತ್ತಾರೆ. ಸೊಸೆ ಅಶ್ವಿನಿ ಎರಡು ಕಾಲುಗಳನ್ನು ಕತ್ತರಿಸಲಾಗಿದೆ. ಕಾಂತಪ್ಪ ಪೂಜಾರಿ ಅವರ ಒಂದು ಕಾಲನ್ನು ಕತ್ತರಿಸಲಾಗಿದೆ. ಅವರು ವಾಸವಿದ್ದ ಮನೆ ಸಂಪೂರ್ಣವಾಗಿ ಬಿದ್ದಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿರುವ ಅವರ ಕಷ್ಟಕ್ಕೆ ಸ್ಪಂದಿಸಿ ಸೇವಾ ಸಂಘವು ರೂ.10000ವನ್ನು ಹಸ್ತಾಂತರಿಸಿದೆ.