ರೈಲು ನಿಲ್ದಾಣದಲ್ಲಿ ಮಹಿಳೆಯ ರಕ್ಷಣೆ

ರೈಲು ನಿಲ್ದಾಣದಲ್ಲಿ ಮಹಿಳೆಯ ರಕ್ಷಣೆ

ಉಡುಪಿ: ಕೇರಳದಿಂದ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕೇರಳದಿಂದ ಆಗಮಿಸಿದ ಮಹಿಳೆಯನ್ನು ಇಂದ್ರಾಳಿ ರೈಲು ನಿಲ್ದಾಣದಲ್ಲಿ ರಕ್ಷಿಸಿರುವ ಘಟನೆ ಸೋಮವಾರ ನಡೆದಿದೆ. ಮನೋವ್ಯಾಧಿಯಿಂದ ಬಳಲುತ್ತಿದ್ದ ಮಹಿಳೆ ಮಲಪ್ಪುರಂನಿಂದ ಮನೆ ಮಂದಿಗೆ ಯಾವೊಂದೂ ಸೂಚನೆ ನೀಡದೆ ನಾಪತ್ತೆಯಾಗಿದ್ದರು.

ಹುಡುಕಾಟ ನಡೆಸುತ್ತಿದ್ದ ಮನೆಯವರಿಗೆ ಮಹಿಳೆ ನೇತ್ರಾವತಿ ಏಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿರುವುದು ತಿಳಿದುಬಂದಿದ್ದು, ಅವರು ಉಡುಪಿಯಲ್ಲಿರುವ ಸಂಬಂಧಿಕರಿಗೆ ಮಾಹಿತಿ ನೀಡಿದರು. ಅವರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ನೆರವು ಪಡೆದರು.

ಒಳಕಾಡು ಸಹಕಾರದಿಂದ ರಾತ್ರಿ 11 ಗಂಟೆಗೆ ಮಹಿಳೆಯನ್ನು ವಶಕ್ಕೆ ಪಡೆದು ದೊಡ್ಡಣಗುಡ್ಡೆ ಡಾ.ಎ.ವಿ. ಬಾಳಿಗ ಆಸ್ಪತ್ರೆಗೆ ದಾಖಲುಪಡಿಸಿದರು. ಒಳಕಾಡು ಅವರು ಉಚಿತ ಆಂಬುಲೆನ್ಸ್ ಸೇವೆ ನೀಡಿ ಸಹಕರಿಸಿದರು. ಸೋಮವಾರ ಕೇರಳದಿಂದ ಆಗಮಿಸಿದ ವಾರಸುದಾರರು ಮಹಿಳೆಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಊರಿಗೆ ಕರೆದೊಯ್ದರು.

ಮಣಿಪಾಲ ಪೋಲಿಸ್ ಠಾಣೆಯ ಎಎಸ್‌ಐ ವಿಜಯ್, ಪತ್ರಕರ್ತ ಶಾರುಖ್ ತೀರ್ಥಹಳ್ಳಿ, ನಿಹಾಲ್ ಹೂಡೆ, ಅಪ್ಸಾನ್ ಮೊದಲಾದವರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article