ಪಡುಮಾರ್ನಾಡು ಅಮನ ಬೆಟ್ಟು ಮಹಾವೀರ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನ ಆಚರಣೆ

ಪಡುಮಾರ್ನಾಡು ಅಮನ ಬೆಟ್ಟು ಮಹಾವೀರ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನ ಆಚರಣೆ


ಮೂಡುಬಿದಿರೆ: ತಾಲೂಕಿನ ಪಡುಮಾರ್ನಾಡು ಗ್ರಾಮದ ಅಮನ ಬೆಟ್ಟು ಮಹಾವೀರ ವಿದ್ಯಾ ಸಂಸ್ಥೆಯಲ್ಲಿ ಪಂಚಾಯತ್ ಸದಸ್ಯ ರಮೇಶ ಶೆಟ್ಟಿ ಧ್ವಜವನ್ನು ಅರಳಿಸುವ ಮೂಲಕ 79ನೇ ವಷ೯ದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು ಸಂದರ್ಭದಲ್ಲಿ ಪ್ರಜ್ಞಾ ಯುವಕ, ಯುವತಿ ಮಂಡಲ ಹಾಗೂ ಸಾಯಿ ಮಾರ್ನಾಡ್ ಸದಸ್ಯರುಗಳು ಹಾಜರಿದ್ದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ತರಬೇತುದಾರ, ಪತ್ರಕತ೯ ರಾಯಿ ರಾಜಕುಮಾರ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ನಿಷೇಧದ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಉಪನ್ಯಾಸಕ ಭಾಸ್ಕರ್ ದೇವಾಡಿಗ ಉತ್ತಮ ಕೆಲಸದ ಧರ್ಮದಿಂದ ಸಮಾಜದ ಏಳಿಗೆ ಸಾಧ್ಯ ಎಂದರು.

ಸಾಯಿ ಮಾರ್ನಾಡ್ ನ ಅಧ್ಯಕ್ಷ ಯತೀಶ್, ಪಾಡಿಮನೆ ಯತೀಂದ್ರ ರಾವ್, ನಿವೃತ್ತ ಶಿಕ್ಷಕ ಜಯ ಬಿ., ಯುವಕ ಮಂಡಲದ ಅಧ್ಯಕ್ಷ ವೈಷ್ಣವ ಹೆಗ್ಡೆ, ಪ್ರಜ್ಞಾ ಯುವತಿ ಮಂಡಲದ ಅಧ್ಯಕ್ಷೆ ಶೋಭಾ, ಸಂಧ್ಯಾ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಗೊಂಡಿತು. 

ಶಿಕ್ಷಕಿ ಹೇಮಾವತಿ ಸ್ವಾಗತಿಸಿದರು. ಸುನಿತಾ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ಪ್ರತಿಭಾ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article