ಆಲಂಗಾರು ದೇವಳದ ಮೊಕ್ತೇಸರ ಈಶ್ವರ ಭಟ್ ಅವರಿಗೆ "ಶ್ರೀ ಕೃಷ್ಣ" ಪ್ರಶಸ್ತಿ ಪ್ರದಾನ
ಪಿಯುಸಿಯಲ್ಲಿ ಸಾಧನೆ ಮಾಡಿದ ಎಕ್ಸಲೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿ ಸುಶಾಂತ್ ಕರ್ಕೇರ, ಆಳ್ವಾಸ್ ಪಿಯು ಕಾಲೇಜಿನ ಪೂಜಾ ಭಂಡಾರಿ, ಎಂಎಸ್ಸಿಯಲ್ಲಿ ಸಾಧನೆ ಮಾಡಿದ ಮೇಘನಾ ರಾವ್ ಬೊಕ್ಕಸ, ಶ್ರೀಕೃಷ್ಣ ವೇಷಧಾರಿ ಚಂದ್ರಶೇಖರ್ ಮಳಲಿ,ಅಂತಾರಾಷ್ಟ್ರಿಯ ಫೋಟೋಗ್ರಾಫಿ ಮೆಡಲ್ ಪಡೆದ ರವಿ ಕೋಟ್ಯಾನ್, ಮಾನಸ ಫೋಟೋಗ್ರಾಫಿ ಮೂಡುಬಿದಿರೆ ಹಾಗೂ ಮೂಡುಬಿದಿರೆ ಪ್ರೆಸ್ಕ್ಲಬ್ ಅಧ್ಯಕ್ಷ ಬಿ.ಸೀತಾರಾಮ ಆಚರ್ಯಅವರನ್ನು ಗೌರವಿಸಲಾಯಿತು.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಹೈಕೋರ್ಟ್ ಹಿರಿಯ ವಕೀಲ ಇರುವೈಲು ತಾರಾನಾಥ ಪೂಜಾರಿ, ಪ್ರಭಾತ್ ಸಿಲ್ಕ್ ಮಾಲಕ ಪ್ರಭಾಚಂದ್ರ ಜೈನ್, ಗೋಪಾಲಕೃಷ್ಣ ದೇವಳದ ಆಡಳಿತ ಮೊಕ್ತೇಸರ ಗುರುಪ್ರಸಾದ್ ಹೊಳ್ಳ, ಬಿಜೆಪಿ ಮೂಲ್ಕಿ-ಮೂಡುಬಿದಿರೆ ಮಂಡಲದ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಆರ್.ಕೆ ಎಂಟರ್ಪ್ರೆöÊಸಸ್ನ ಮಾಲಕ ರಾಮಕೃಷ್ಣ ಭಟ್, ವಕೀಲೆ ಮೇಘರಾಣಿ ಸಹಿತ ಗಣ್ಯರು ಮುಖ್ಯ ಅತಿಥಿಯಾಗಿದ್ದರು.
ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ನ ಗೌರವಾಧ್ಯಕ್ಷ ಸುದರ್ಶನ್ ಎಂ., ಅಧ್ಯಕ್ಷ ಸಂತೋಷ್ ಕುಮಾರ್, ಸಂಚಾಲಕ ಬಿ.ಸುರೇಶ್ ರಾವ್, ಪ್ರಧಾನ ಕಾರ್ಯದರ್ಶಿ ಸುಶಾಂತ್ ಕರ್ಕೇರ ಮಾರೂರು, ಉಪಾಧ್ಯಕ್ಷರಾದ ಸತೀಶ್ ಭಂಡಾರಿ. ಸಂಜೀವ ನಾಯ್ಕ್, ಜೊತೆ ಕಾರ್ಯದರ್ಶಿಗಳಾದ ಆನಂದ ಭಂಡಾರಿ, ಆನಂದ ಸುವರ್ಣ, ಸುರೇಶ್ ಭಂಡಾರಿ , ಕೋಶಾಧಿಕಾರಿ ಶಿವಾನಂದ ಶಾಂತಿ, ಗೌರವ ಸಲಹೆಗಾರರಾದ ಕೆ.ವಿ ರಮಣ್, ಧನಂಜಯ ಮೂಡುಬಿದಿರೆ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.