ಮೂಡುಬಿದಿರೆ: ನವರಾತ್ರಿಯ ಪ್ರಯುಕ್ತ ಪುತ್ತಿಗೆ ಪಳಕಳ ಮಿತ್ರ ಮಂಡಳಿ (ರಿ) ವತಿಯಿಂದ ಶ್ರೀ ಕ್ಷೇತ್ರ ಕಟೀಲಿಗೆ 8ನೇ ವರ್ಷದ ಬೃಹತ್ ಪಾದಯಾತ್ರೆ ಭಾನುವಾರ ನಡೆಯಿತು.
"ಅಮ್ಮನೆಡೆಗೆ ನಮ್ಮ ನಡಿಗೆ" ಎಂಬ ವಾಕ್ಯದೊಂದಿಗೆ ಪಳಕಳ ಸತ್ಯನಾರಾಯಣ ಕಟ್ಟೆಯಿಂದ ಮುಂಜಾನೆ 5 ಗಂಟೆಗೆ ಹೊರಟ ಪಾದಯಾತ್ರೆಯಲ್ಲಿ ಸುಮಾರು 200 ಮಂದಿ ಭಕ್ತರು ಪಾಲ್ಗೊಂಡಿದ್ದರು.