ಕನ್ನಡ ಪ್ರಬಂಧ ಸ್ಪರ್ಧೆ: ಸಂತ ಫಿಲೋಮಿನಾ ಕಾಲೇಜಿನ ಶ್ರೀವಿದ್ಯಾ ಎನ್.ಗೆ ನಗದು ಬಹುಮಾನ
Sunday, September 28, 2025
ಪುತ್ತೂರು: ಡಾ. ಕೆ.ವಿ. ಜಲಜಾಕ್ಷಿ ಸಂಸ್ಮರಣಾ ಪ್ರತಿಷ್ಠಾನ (ಡಾ.ಕೆ.ವಿ.ಜ.ಸಂ.ಪ್ರ.) ಮತ್ತು ಮಂಗಳೂರಿನ ಕರಾವಳಿ ಲೇಖಕಿಯರ ವಾಚಕಿಯರ ಸಂಘ (ಕ.ಲೇ.ವಾ.ಸಂ.)ದ ಜಂಟಿ ಆಶ್ರಯದಲ್ಲಿ ದಿವಂಗತ ಡಾ. ಕೆ.ವಿ. ಜಲಜಾಕ್ಷಿಯವರ ಸ್ಮರಣಾರ್ಥ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಪ್ರಬಂಧ ಸ್ಪರ್ಧೆ ನಡೆಯಿತು.
ಈ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ(ಸ್ವಾಯತ್ತ) ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಶ್ರೀವಿದ್ಯಾ ಎನ್. ಸ್ಪರ್ಧಿಸಿ 1000 ರೂ. ನಗದು ಬಹುಮಾನವನ್ನು ಪಡೆಡುಕೊಂಡಿದ್ದಾರೆ.
ಇವರನ್ನು ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೋಂತೆರೋ ಅಭಿನಂದಿಸಿದ್ದಾರೆ.