ಊರುಗೋಲಿನ ಕೃಷಿಕರಾಗಿದ್ದ ಜಾರಪ್ಪ ಪೂಜಾರಿ ನಿಧನ

ಊರುಗೋಲಿನ ಕೃಷಿಕರಾಗಿದ್ದ ಜಾರಪ್ಪ ಪೂಜಾರಿ ನಿಧನ


ಮೂಡುಬಿದಿರೆ: ಎರಡೂ ಕಣ್ಣುಗಳು ದೃಷ್ಠಿ ಕಳೆದುಕೊಂಡಿದ್ದರೂ ಊರುಗೋಲನ್ನೇ ನಂಬಿ ಕೃಷಿ ಚಟುವಟಿಕೆ ಮಾಡಿ ಉತ್ತಮ ಫಸಲನ್ನು ಪಡೆಯುತ್ತಿದ್ದ ಅತ್ಯುತ್ತಮ ಕೃಷಿಕ, ಶಿರ್ತಾಡಿ ಕಂದಿರು ಮನೆಯ ಜಾರಪ್ಪ ಪೂಜಾರಿ (69) ಅವರು ಶನಿವಾರ ನಿಧನಾಗಿದ್ದಾರೆ.

ಕಂದಿರುವಿನ ಜೆ.ಎನ್.ಎಸ್.ಕನ್ಸ್ಟ್ರಕ್ಷನ್ಸ್ ನ ಸುರೇಂದ್ರ ಕೆ.ಅವರ ತಂದೆಯಾಗಿರುವ ಅವರು ತನ್ನ ಕೃಷಿಗಾಗಿ ಹಲವು ಕಡೆ ಸನ್ಮಾನಗೊಂಡಿದ್ದರು. 

ದೃಷ್ಟಿದೋಷವಿದ್ದರೂ ತಾನು ಇಷ್ಟ ಪಡುತ್ತಿದ್ದ ಕೃಷಿ ಚಟುವಟಿಕೆಯನ್ನು ಬಿಡದೆ  ಇತ್ತೀಚಿನವರೆಗೂ ಊರುಗೋಲಿನ ಸಹಾಯದಿಂದ ಗದ್ದೆ, ತೋಟಕ್ಕೆ ಹೋಗಿ ಕೃಷಿ ಚಟುವಟಿಕೆ ನಡೆಸುತ್ತಿದ್ದರು. 

ಮೃತರು ಪತ್ನಿ, ಪುತ್ರ ಸುರೇಂದ್ರ ಕೆ, ಪುತ್ರಿಯರು, ಸೊಸೆ,ಅಳಿಯಂದಿರು,ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article