ವೈವಿಧ್ಯತೆಯೇ ಭಾರತದ ನಿಜವಾದ ಶಕ್ತಿ: ಸಚಿವ ದಿನೇಶ್ ಗುಂಡೂ ರಾವ್
ಭಾರತದ ಸೌಂದರ್ಯ ಅದರ ವೈವಿಧ್ಯತೆಯಲ್ಲಿ ಅಡಗಿದೆ. ಪರಸ್ಪರದ ಭಿನ್ನತೆಯನ್ನು ಗೌರವಿಸಿ, ಸಾಮಾನ್ಯ ಮೌಲ್ಯಗಳಲ್ಲಿ ಒಂದಾಗುವ ಮನೋಭಾವವೇ ನಮ್ಮ ದೇಶದ ಶಕ್ತಿ. ಈಶಾನ್ಯ ಭಾರತದ ಜನರು ಕರ್ನಾಟಕದ ಜೀವನದ ಅಂಗವಾಗಿ ಬೆರೆತು, ರಾಷ್ಟ್ರದ ಏಕತೆಯನ್ನು ಬಲಪಡಿಸಿದ್ದಾರೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕರ್ನಾಟಕವು ಶಾಂತಿ ಮತ್ತು ಸಹಬಾಳ್ವೆಯ ನೆಲವಾಗಿದೆ. ಮಂಗಳೂರಿನಲ್ಲಿಯೂ ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಬದುಕುತ್ತಿದ್ದಾರೆ ಎಂದರು. ನಮ್ಮ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಶಿವಾಜಿ ಮಹಾರಾಜರು, ಟಿಪ್ಪು ಸುಲ್ತಾನ್ ಮೊದಲಾದವರ ಬಗ್ಗೆ ಓದುತ್ತೇವೆ, ಆದರೆ ಮಣಿಪುರ ಹಾಗೂ ಇತರ ಈಶಾನ್ಯ ರಾಜ್ಯಗಳ ಶ್ರೀಮಂತ ಇತಿಹಾಸವನ್ನು ತಿಳಿಯುವ ಅವಕಾಶ ಇಲ್ಲ. ಪರಸ್ಪರ ಸಂಸ್ಕೃತಿಗಳನ್ನು ಅರಿತುಕೊಳ್ಳಲು ಆಳ್ವಾಸ್ ಸದಾ ಪ್ರೋತ್ಸಾಹಿಸುತ್ತದೆ. ಅದಕ್ಕಾಗಿ ನಾವು ಪ್ರತಿವರ್ಷ ನಿಂಗೋಲ್ ಚಾಕೋಬಾ ಮತ್ತು ಸಜಿಬು ಚೆರೋಬಾ ಸೇರಿದಂತೆ ಈಶಾನ್ಯ ಭಾರತದ ಉತ್ಸವಗಳನ್ನು ನಮ್ಮ ಆವರಣದಲ್ಲಿ ಆಯೋಜಿಸುತ್ತೇವೆ ಎಂದರು.
ಈ ಕಾಯ೯ಕ್ರಮದಲ್ಲಿ ನೇಪಮ್ ವ್ಯಾಪ್ತಿಗೆ ಒಳಪಟ್ಟ 850 ವಿದ್ಯಾರ್ಥಿಗಳು ಆಗಮಿಸಿದ್ದರು. ಆಳ್ವಾಸ್ ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲ ಡಾ. ರೋಷನ್ ಇದ್ದರು.
ನೇಪಮ್ ಅಧ್ಯಕ್ಷ ಯಾನೋಲುಂಗರ್ ಥೋಚ್ಚುಯಿಯೋ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನೇಪಮ್ನ ಅತಿಥ್ಯ ಹಾಗೂ ಶ್ರೀನಿವಾಸ ಕಾಯ೯ಕ್ರಮ ನಿರೂಪಿಸಿದರು. ನೇಪಮ್ ಸಲಹೆಗಾರ್ತಿ ಡಾ. ಕೈನಿ ಸೆಸಿಲಿಯಾ ವಂದಿಸಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಆಳ್ವಾಸ್ನ ಈಶಾನ್ಯ ಭಾರತದ ವಿದ್ಯಾರ್ಥಿಗಳಿಂದ ಡೊಳ್ಳು ಕುಣಿತ, ಕರ್ನಾಟಕದ ಸಾಂಪ್ರದಾಯಿಕ ನೃತ್ಯಕಲೆಗಳನ್ನು ಪ್ರದಶಿ೯ಸಲಾಯಿತು.
