ಸುರತ್ಕಲ್ನಲ್ಲಿ ಸಿಎನ್ಜಿ ಗ್ಯಾಸ್ ಸಿಲಿಂಡರ್ ಸೋರಿಕೆ: ಜನರಲ್ಲಿ ಆತಂಕ
ಗೇಲ್ ಇಂಡಿಯಾ ಕಂಪೆನಿಗೆ ಸೇರಿದ ತೆರೆದ ಲಾರಿಯಲ್ಲಿ ಸಿಎನ್ಜಿ ಆಟೋ ಅನಿಲವನ್ನು ಪಣಂಬೂರು ಶೇಖರಣಾ ಘಟಕದಿಂದ ಉಡುಪಿ ಕಡೆ ಬೃಹತ್ ಸಿಲಿಂಡರ್ಗಳ ಮೂಲಕ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಅನಿಲ ಸೋರಿಕೆಯಾಗಿದೆ ಎನ್ನಲಾಗಿದ್ದು, ಕೆಲಹೊತ್ತು ಸಾರ್ವಜನಿಕರು ಆತಂಕಕ್ಕೀಡಾದರು.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸುರತ್ಕಲ್ ಪೊಲೀಸರು ಮತ್ತು ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಹೆದ್ದಾರಿಯ ಎರಡೂ ಭಾಗದಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ದೂರದಲ್ಲೆ ತಡೆದು ನಿಲ್ಲಿಸಿದರು ಎನ್ನಲಾಗಿದೆ. ಈ ಸಂದರ್ಭ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಕ್ಷಣ ಪೊಲೀಸರು ಗೇಲ್ ಇಂಡಿಯಾ ಕಂಪೆನಿಗೆ ಮಾಹಿತಿ ನೀಡಿ ಟೆಕ್ನೀಶಿಯನ್ಗಳನ್ನು ಕರೆಸಿಕೊಂಡು ಸೋರಿಕೆಯನ್ನು ತಡೆಗಟ್ಟಿ ಲಾರಿಯನ್ನು ಪಣಂಬೂರು ಶೇಖರಣಾ ಘಟಕಕ್ಕೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಿಲಿಂಡ್ ಸುಮಾರು 75ಲೀ ಸಾಮರ್ಥ್ಯದ್ದು, ಇದರಲ್ಲಿ ಕನಿಷ್ಠ ಪ್ರಮಾಣದ ಗ್ಯಾಸ್ ಸೋರಿಕೆಯಾಗಿದೆಯಷ್ಟೇ. ತಕ್ಷಣ ನಮ್ಮ ಇಂಜಿಯರ್ಗಳು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ತೆರಳಿ ಸೋರಿಕೆಯನ್ನು ಸರಿಪಡಿಸಿದೆ. ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಗ್ಯಾಸ್ ಸಾಗಾಟ ವಿಭಾಗದ ಸಿಬ್ಬಂದಿ ನೋವೆಲ್ ತಿಳಿಸಿದ್ದಾರೆ.