ಇಸ್ರೇಲ್ ಮತ್ತು ಭಾರತ ಎದುರಿಸುತ್ತಿರುವ ಅಪಾಯಗಳಲ್ಲಿ ಸಾಮ್ಯವಿದೆ: ವಿಶ್ವೇಶ್ವರ ಭಟ್
ಅವರು ಬರೆದಿರುವ ‘ಬದುಕುಳಿದವರು ಕಂಡಂತೆ’ ಎಂಬ ಕೃತಿಯ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ‘ಇಸ್ರೇಲ್ ಮತ್ತು ಪ್ಯಾಲೇಸ್ತೀನ್ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾದರೆ ಆ ದೇಶಗಳ ಇತಿಹಾಸವನ್ನು ನೋಡಬೇಕು. ಬಲ ಮತ್ತು ಎಡ ಎಂಬ ಮಸೂರ ಇಟ್ಟುಕೊಂಡು ನೋಡಬಾರದು. ಇಸ್ರೇಲಿಗರ ದೇಶಪ್ರೇಮ ಅಭೂತಪೂರ್ವವಾದದ್ದು ಎಂದರು.
ಇಸ್ರೇಲಿಗರನ್ನು ಮೆಚ್ಚಿಕೊಂಡ ಅವರು, ‘ಇಸ್ರೇಲ್ನ ಶೇ.65 ಭಾಗ ಮರುಭೂಮಿಯಿಂದ ಕೂಡಿದೆ. ಮಂಗಳೂರಿನಲ್ಲಿ ಒಂದು ಗಂಟೆಯಲ್ಲಿ ಬರುವ ಮಳೆ ಅಲ್ಲಿ ಒಂದು ವರ್ಷದಲ್ಲಿ ಬರುತ್ತದೆ. ಆದರೂ ಅವರು ನೀರಾವರಿ ಕುರಿತು ಜಗತ್ತಿಗೆ ಪಾಠ ಮಾಡುತ್ತಾರೆ. ಇಡೀ ವಿಶ್ವದಲ್ಲಿ ಇಸ್ರೇಲಿಗರು ಎಲ್ಲೇ ತೊಂದರೆಗೆ ಒಳಗಾದರೂ ಇಡೀ ರಾಷ್ಟ್ರವೇ ಅವರ ನೆರವಿಗೆ ಧಾವಿಸುತ್ತದೆ’ ಎಂದರು.
ಇಸ್ರೇಲ್ನ ಅತ್ತ ಇತ್ತ ಇರುವ ಎಲ್ಲಾ ರಾಷ್ಟ್ರಗಳು ಅವರ ವಿರುದ್ದ ದಾಳಿ ಮಾಡಿವೆ. ಅವರು ಯಾವಾಗಲೋ ನಿರ್ಣಾಮ ಆಗಬೇಕಿತ್ತು. ಆದರೆ ಅವರ ಇಚ್ಛಾಶಕ್ತಿಯಿಂದ ಅವರು ಇಂದಿಗೂ ಹೋರಾಡುತ್ತಲೇ ಇದ್ದಾರೆ’ ಎಂದು ಹೇಳಿದರು. ಇಸ್ರೇಲ್ ನ ಭೌಗೋಳಿಕತೆ ಕುರಿತ ಸಂಪೂರ್ಣ ವಿವರ ನೀಡಿದ ಅವರ ಗೋಷ್ಠಿ ಕಿಕ್ಕಿರಿದು ತುಂಬಿತ್ತು.
ಶ್ರೀಕಾಂತ್ ಶೆಟ್ಟಿ ಗೋಷ್ಠಿಯನ್ನು ನಿರ್ವಹಿಸಿದರು.