ನೆಟ್ಲ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ‘ಪ್ರಮೋಷನ್ ಡೇ’ ಕಾರ್ಯಕ್ರಮ
ದಕ್ಷಿಣ ಕನ್ನಡ ಜಿಲ್ಲಾ ಹಸಿರು ದಳದ ಮ್ಯಾನೇಜರ್ ನಾಗರಾಜ್ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಪೋಷಕರ ಸಹಕಾರ ಇದ್ದಾಗ ಮಾತ್ರ ಸರಕಾರಿ ಶಾಲೆ ಉಳಿಯಲು ಸಾಧ್ಯ, ಜನರಿಗೆ ಸ್ವಚ್ಛತೆ ಬಗ್ಗೆ ನಾಗರಿಕ ಪ್ರಜ್ಞೆ ಹಾಗೂ ಜಾಗ್ರತಿಯ ಅವಶ್ಯಕತೆ ಇದೆ ಎಂದರು.
ಈ ಸಂದರ್ಭದಲ್ಲಿ ಏಳನೇ ತರಗತಿ ಮಕ್ಕಳ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಲಾಯಿತು. 6ನೇ ತರಗತಿ ಮಕ್ಕಳು 7ನೇ ತರಗತಿ ಮಕ್ಕಳನ್ನು ಸ್ಮರಣೆಕೆ ಹಾಗು ವಿವಿಧ ಉಡುಗರೆಗಳನ್ನು ನೀಡಿ ಗೌರವಿಸಿದರು.
ಶಾಲೆಯಿಂದ ಬೀಳ್ಕೊಡುತ್ತಿರುವ ಮಕ್ಕಳು ತಮ್ಮ ನೆನಪಿಗಾಗಿ ಒಂದು ಪ್ಯಾನಲ್ ಬೋರ್ಡ್ ಶಾಲೆಗೆ ಹಸ್ತಾಂತರಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ್ ಕುಲಾಲ್, ಉಪಾಧ್ಯಕ್ಷೆ ಭವ್ಯ, ಶಾಲಾ ಮುಖ್ಯ ಶಿಕ್ಷಕಿ ಶೋಭಾಲತಾ, ಹಸಿರು ದಳದ ಮೇಲ್ವಿಚಾರಕ ಸಾಂತಪ್ಪ ಉಪಸ್ಥಿತರಿದ್ದರು.
ಎಲ್ಲಾ ಮಕ್ಕಳಿಗೆ ಪೋಷಕರ ಜೊತೆ ಮುಂದಿನ ತರಗತಿಗೆ ಪ್ರಮೋಷನ್ ಅದ ಬಗ್ಗೆ ಪತ್ರ ನೀಡಲಾಯಿತು. ಪೋಷಕರು ಶಾಲೆಯಲ್ಲಿ ಸಿಗುವ ಶಿಕ್ಷಣದ ಗುಣಮಟ್ಟದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ಈ ಸಂದರ್ಭದಲ್ಲಿ ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ನೆಟ್ಲಶಾಲೆಯನ್ನು ದತ್ತು ಸ್ವೀಕಾರ ಮಾಡಲಾಯಿತು. ಹಿರಿಯ ಶಿಕ್ಷಕ ಪ್ರವೀಣ್ ಸ್ವಾಗತಿಸಿ, ಶಾಲ ಶಿಕ್ಷಕರು ತರಗತಿವಾರು ಮಕ್ಕಳ ಪ್ರಮೋಷನ್ ಪತ್ರ ವಾಚಿಸಿದರು. ಚಿತ್ರಕಲಾ ಶಿಕ್ಷಕ ಜಯರಾಮ್ ನಾವಡ ಕಾರ್ಯ ಕ್ರಮ ನಿರೂಪಿಸಿದರು.
