ಸಂಸತ್ ಆವರಣದಲ್ಲಿ ಸನಾತನ ಪರಂಪರೆಗೆ ಅವಮಾನ: ಶಾಸಕ ಕಾಮತ್ ಖಂಡನೆ

ಸಂಸತ್ ಆವರಣದಲ್ಲಿ ಸನಾತನ ಪರಂಪರೆಗೆ ಅವಮಾನ: ಶಾಸಕ ಕಾಮತ್ ಖಂಡನೆ


ಮಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರದ ಕಾಣಿಕೆ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಜಾಪ್ರಭುತ್ವದ ದೇಗುಲವೆನಿಸಿಕೊಂಡ ಸಂಸತ್ ಆವರಣದಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ನಡೆಸಿದ ಪ್ರತಿಭಟನೆಯು ಹಿಂದೂ ವಿರೋಧಿ ಮನಸ್ಥಿತಿಯನ್ನು ಹೊರಹಾಕಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತೀಯ ಪರಂಪರೆಯನ್ನು ಅವಮಾನಿಸುವುದು, ಸಂತ ಶ್ರೇಷ್ಠರನ್ನು ಅಪಹಾಸ್ಯ ಮಾಡುವುದು, ಹಿಂದು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯುಂಟು ಮಾಡುವುದು ಇವೆಲ್ಲಾ ಕಾಂಗ್ರೆಸ್‌ನಂತಹ ಬೂಟಾಟಿಕೆಯ ಸೆಕ್ಯುಲರ್ ಪಕ್ಷಕ್ಕೆ ರಕ್ತದಲ್ಲೇ ಬಂದಿದೆ. ರಾಹುಲ್ ಗಾಂಧಿಯ ವರ್ತನೆಯಂತೂ ಇನ್ನೂ ಮಂದ ಬುದ್ದಿ ಹೋಗಿಲ್ಲ ಎಂಬುದನ್ನು ತೋರಿಸುತ್ತಿದೆ. ಕಾಂಗ್ರೆಸ್ಸಿಗರಿಗೆ ಹಿಂದೂ ಧರ್ಮವೆಂದರೆ ಅಸಡ್ಡೆಯಿರಬಹುದು, ಆದರೆ ನಮಗೆ ಅದು ಪರಮ ಪವಿತ್ರ. ಕೂಡಲೇ ಅವರೆಲ್ಲರೂ ಸಮಸ್ತ ಹಿಂದೂ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಇತರ ಮತಗಳ ಧಾರ್ಮಿಕ ಸಂಸ್ಥೆಗಳಲ್ಲೂ ಅವ್ಯವಹಾರ ನಡೆದಿರುವ ಅನೇಕ ಉದಾಹರಣೆಗಳಿವೆ. ಆಗ ಅವರ ಧಾರ್ಮಿಕ ಗುರುಗಳ ವೇಷ ಧರಿಸಿ ವ್ಯಂಗ್ಯವಾಡುವ ಧೈರ್ಯ ಕಾಂಗ್ರೆಸ್ ಹಾಗೂ ಮಿತ್ರಪಕ್ಷಕ್ಕೆ ಯಾಕಿರಲಿಲ್ಲ? ಹಿಂದೂ ಸಮಾಜದ ತಾಳ್ಮೆ ದೌರ್ಬಲ್ಯವಲ್ಲ ಎಂಬುದನ್ನು ಕಾಂಗ್ರೆಸ್ ನೆನಪಿಟ್ಟುಕೊಳ್ಳಲಿ. ಇಂತಹ ಹಿಂದೂ ವಿರೋಧಿ ನೀತಿಯಿಂದಲೇ ದೇಶಾದ್ಯಂತ ನಿರ್ಣಾಮವಾಗುತ್ತಿರುವ ಕಾಂಗ್ರೆಸ್ ಕೆಲವೇ ವರ್ಷಗಳಲ್ಲಿ ಇತಿಹಾಸದ ಪುಟ ಸೇರಿದರೂ ಅಚ್ಚರಿಯಿಲ್ಲ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article