ಸಂಸತ್ ಆವರಣದಲ್ಲಿ ಸನಾತನ ಪರಂಪರೆಗೆ ಅವಮಾನ: ಶಾಸಕ ಕಾಮತ್ ಖಂಡನೆ
ಭಾರತೀಯ ಪರಂಪರೆಯನ್ನು ಅವಮಾನಿಸುವುದು, ಸಂತ ಶ್ರೇಷ್ಠರನ್ನು ಅಪಹಾಸ್ಯ ಮಾಡುವುದು, ಹಿಂದು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯುಂಟು ಮಾಡುವುದು ಇವೆಲ್ಲಾ ಕಾಂಗ್ರೆಸ್ನಂತಹ ಬೂಟಾಟಿಕೆಯ ಸೆಕ್ಯುಲರ್ ಪಕ್ಷಕ್ಕೆ ರಕ್ತದಲ್ಲೇ ಬಂದಿದೆ. ರಾಹುಲ್ ಗಾಂಧಿಯ ವರ್ತನೆಯಂತೂ ಇನ್ನೂ ಮಂದ ಬುದ್ದಿ ಹೋಗಿಲ್ಲ ಎಂಬುದನ್ನು ತೋರಿಸುತ್ತಿದೆ. ಕಾಂಗ್ರೆಸ್ಸಿಗರಿಗೆ ಹಿಂದೂ ಧರ್ಮವೆಂದರೆ ಅಸಡ್ಡೆಯಿರಬಹುದು, ಆದರೆ ನಮಗೆ ಅದು ಪರಮ ಪವಿತ್ರ. ಕೂಡಲೇ ಅವರೆಲ್ಲರೂ ಸಮಸ್ತ ಹಿಂದೂ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಇತರ ಮತಗಳ ಧಾರ್ಮಿಕ ಸಂಸ್ಥೆಗಳಲ್ಲೂ ಅವ್ಯವಹಾರ ನಡೆದಿರುವ ಅನೇಕ ಉದಾಹರಣೆಗಳಿವೆ. ಆಗ ಅವರ ಧಾರ್ಮಿಕ ಗುರುಗಳ ವೇಷ ಧರಿಸಿ ವ್ಯಂಗ್ಯವಾಡುವ ಧೈರ್ಯ ಕಾಂಗ್ರೆಸ್ ಹಾಗೂ ಮಿತ್ರಪಕ್ಷಕ್ಕೆ ಯಾಕಿರಲಿಲ್ಲ? ಹಿಂದೂ ಸಮಾಜದ ತಾಳ್ಮೆ ದೌರ್ಬಲ್ಯವಲ್ಲ ಎಂಬುದನ್ನು ಕಾಂಗ್ರೆಸ್ ನೆನಪಿಟ್ಟುಕೊಳ್ಳಲಿ. ಇಂತಹ ಹಿಂದೂ ವಿರೋಧಿ ನೀತಿಯಿಂದಲೇ ದೇಶಾದ್ಯಂತ ನಿರ್ಣಾಮವಾಗುತ್ತಿರುವ ಕಾಂಗ್ರೆಸ್ ಕೆಲವೇ ವರ್ಷಗಳಲ್ಲಿ ಇತಿಹಾಸದ ಪುಟ ಸೇರಿದರೂ ಅಚ್ಚರಿಯಿಲ್ಲ ಎಂದರು.