Moodubidire: ಸಹಾಯಹಸ್ತ ವಿತರಣೆ
Sunday, February 4, 2024
ಮೂಡುಬಿದಿರೆ: ಕಾರ್ಕಳ ತಾಲೂಕಿನ ಗಣೇಶ್ ಆಚಾರ್ಯ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸಾ ವೆಚ್ಚಕ್ಕಾಗಿ ಮೂಡುಬಿದಿರೆಯ ನೇತಾಜಿ ಬ್ರಿಗೇಡ್ ಇದರ ತುರ್ತು ಸೇವಾ ಯೋಜನೆ ಅಂಗವಾಗಿ ರೂ. 10,000ವನ್ನು ಭಾನುವಾರ ಹಸ್ತಾಂತರಿಸಲಾಯಿತು. ಮಾರ್ನಾಡ್ ಟ್ರಾವೆಲ್ಸ್ ಅಂಡ್ ಅಂಬುಲೆನ್ಸ್ನ ಮಾಲಕ ಪ್ರಶಾಂತ್ ಶೆಟ್ಟಿ, ನೇತಾಜಿ ಬ್ರಿಗೇಡ್ ಸಂಚಾಲಕರು ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.