ಮಳೆಗೆ ಮುಂದುವರಿದ ಹಾನಿ

ಮಳೆಗೆ ಮುಂದುವರಿದ ಹಾನಿ


ಬಂಟ್ವಾಳ: ಸೋಮವಾರ ರಾತ್ರಿಯಿಂದೀಚೆಗೆ ಬಂಟ್ವಾಳ ತಾಲೂಕಿನಾದ್ಯಂತ ಸುರಿದ ಮಳೆಗೆ ಬಂಟ್ವಾಳ ತಾಲೂಕಿನಲ್ಲಿ ಹಾನಿ ಮುಂದುವರಿದಿದೆ.

ಪುದುಗ್ರಾಮದ ಕರ್ಮಾರು ಎಂಬಲ್ಲಿ ಸಫಿಯಾ ಅವರ ಮನೆ ಮೇಲೆ ಮರ ಬಿದ್ದು ಮನೆಗೋಡೆ,ಹಂಚು ಹಾನಿಯಾಗಿದೆ. ಹಾಗೆಯೇ ಮೇರಮಜಲು ಗ್ರಾಮದ ಚಂದ್ರಾವತಿ ಎಂಬವರ ಮನೆಯ ಹಿಂಬದಿ ಬರೆ ಜರಿದು ಬಿದ್ದು ಗೋಡೆಗೆ ಹಾನಿಯಾಗಿದೆ.

ಈ ಎರಡೂ ಸ್ಥಳಗಳಿಗೆ ಇಲ್ಲಿನ ಕಂದಾಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ನಷ್ಟದ ಬಗ್ಗೆ ಅಂದಾಜಿಸಿ, ತಹಶೀಲ್ದಾರರಿಗೆ ವರದಿ ಸಲ್ಲಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article