
ಕೂಡಿಹಾಕಿದ್ದ ಮಹಿಳೆಯ ರಕ್ಷಣೆ
Friday, May 23, 2025
ಪುತ್ತೂರು: ಹಿಂದೂ ಮಹಿಳೆಯನ್ನು ಅನ್ಯಧರ್ಮೀಯನೋರ್ವ ಕೋಣೆಯಲ್ಲಿ ಕೂಡಿ ಹಾಕಿದ್ದಾರೆಂದು ಆರೋಪಿಸಿ ಹಿಂದೂ ಸಂಘಟನೆಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಮಹಿಳೆಯನ್ನು ಠಾಣೆಗೆ ಕರೆದೊಯ್ದ ಘಟನೆ ಮೇ 21ರ ರಾತ್ರಿ ನಗರದ ಪರ್ಲಡ್ಕದಲ್ಲಿ ನಡೆದಿದೆ.
ಕಡಬ ತಾಲೂಕಿನ ಮಹಿಳೆಯೊಬ್ಬರು ಪರ್ಲಡ್ಕದ ಕೊಠಡಿಯಲ್ಲಿ ಇರುವುದು ಹಿಂದು ಸಂಘಟನೆಗಳಿಗೆ ತಿಳಿಯುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸವಣೂರು ನಿವಾಸಿ ಖಾಸಿಂ ಎಂಬಾತ ಮಹಿಳೆಯನ್ನು ಕೂಡಿ ಹಾಕಿದ್ದ. ಪೊಲೀಸರು ಅಲ್ಲಿ ತೆರಳಿದಾಗ ಮಹಿಳೆ ಕೊಠಡಿಯಲ್ಲಿದ್ದು, ಕೊಠಡಿಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಅನಂತರ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ.
ಮಹಿಳೆಯನ್ನು ಆಮಿಷವೊಡ್ಡಿ ವೇಶ್ಯಾವಾಟಿಕೆಗೆ ಕರೆತಂದಿರುವ ಸಾಧ್ಯತೆಯಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸುವಂತೆ ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.