
ಪುತ್ತೂರಿನಲ್ಲಿ ‘ಮೀಟರ್ ಕಳ್ಳರ’ ಹಾವಳಿ
Friday, June 27, 2025
ಪುತ್ತೂರು: ಆಭರಣ ಅಂಗಡಿಗಳಲ್ಲಿ ಮನೆಗಳಲ್ಲಿ ಕಳ್ಳತನ ಮಾಡುವ ಜಾಯಮಾನ ಬಿಟ್ಟು ಇದೀಗ ಕೆಲ ಕಳ್ಳರು ನಗರಸಭೆಯಿಂದ ಅಳವಡಿಸಲಾದ ನೀರು ಸರಬರಾಜಿನ ಮೀಟರ್ಗಳನ್ನು ಕದಿಯಲು ಆರಂಭಿಸಿದ್ದಾರೆ. ಈ ನೀರು ಸರಬರಾಜಿನ ಮೀಟರ್ನಲ್ಲಿ ಹಿತ್ತಾಳೆಯ ವಸ್ತು ಇದೆ. ಇದಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಇದೆ. ಹಾಗಾಗಿ ಇದೀಗ ಕಳ್ಳರ ಕಣ್ಣು ಈ ಮೀಟರ್ ಮೇಲೆ ಬಿದ್ದಿದೆ.
ನಗರಸಭೆಯ ವ್ಯಾಪ್ತಿಯಲ್ಲಿರುವ ಕುಂಬಾರರ ಗುಡಿ ಕೈಗಾರಿಕಾ ಸಂಘ, ಪತ್ರಿಕಾಭವನ, ತೆಂಕಿಲದ ಹೊಸ ಕಟ್ಟಡವೊಂದರಿಂದ ಈ ಮೀಟರ್ಗಳು ಕಳ್ಳತನವಾಗಿವೆ. ಇದು ಕುಡುಕ ಕಳ್ಳರ ಕಿತಾಪತಿಯೋ ಎಂಬ ಶಂಕೆಯೂ ವ್ಯಕ್ತವಾಗಿದೆ. ಆದರೆ ಇದನ್ನು ಪತ್ತೆ ಮಾಡದಿದ್ದರೆ ಈ ಕಳ್ಳರು ಇದೇ ಚಾಳಿಯನ್ನು ಮುಂದುವರಿಸುವ ಸಾಧ್ಯತೆ ಇರುವುದರಿಂದ ನಗರಸಭೆಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಕಳ್ಳರ ಪತ್ತೆಗೆ ಆಗ್ರಹಿಸಲಾಗಿದೆ.