
ನೂರಾರು ಯುವಕರನ್ನು ಸಂಘಟಿಸಿ ರಾಷ್ಟ್ರ ಕಾರ್ಯಕ್ಕೆ, ಸಮಾಜ ಕಾರ್ಯಕ್ಕೆ ನೀಡಿದ ವಾಸುದೇವ ಮಾಸ್ಟ್ರು ನಿಧನಕ್ಕೆ ವಿಹೆಚ್ಪಿ ಸಂತಾಪ
Thursday, July 17, 2025
ಕಾರ್ಕಳ: ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರ ತಂದೆ ವಾಸುದೇವ್ ಮಾಸ್ಟ್ರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅನನ್ಯ ಜವಾಬ್ದಾರಿ ನಿರ್ವಹಿಸಿದವರು. ಚಿಕ್ಕಮಗಳೂರಿನಲ್ಲಿ ಜಿಲ್ಲಾ ಕಾರ್ಯವಾಹಕರಾಗಿದ್ದು ಅಲ್ಲಿ ಸಂಘಕಾರ್ಯವನ್ನು ಕಟ್ಟಿಬೆಳೆಸಿದವರು. ನಮಗೆಲ್ಲ ಮಾರ್ಗದರ್ಶನ ಮಾಡಿದವರು, ಇಂದು ಇಹಲೋಕವನ್ನು ತ್ಯಜಿಸಿದ್ದಾರೆ. ಅವರ ಕುಟುಂಬಕ್ಕೆ, ಅಪಾರ ಬಂಧು ಮಿತ್ರರಿಗೆ ದೇವರು ದುಃಖ ಸಹಿಸುವ ಶಕ್ತಿ ನೀಡಲಿ, ಅವರಿಗೆ ಪರಮಾತ್ಮನು ಸದ್ಗತಿ ಕರುಣಿಸಲಿ ಎಂದು ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಸಂತಾಪ ಸೂಚಿಸಿದರು.