ನದಿಯಲ್ಲಿ ಸ್ನಾನ ಮಾಡುತ್ತಿದ್ದ ಕುಚ್ಚಿಕೊಂಡು ಹೋಗಿ ಮೃತ್ಯು
Thursday, August 7, 2025
ಕೊಲ್ಲೂರು: ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಯುವಕನೋರ್ವ ನೀರಿನಲ್ಲಿ ಕುಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಕೊಲ್ಲೂರು ನಿವಾಸಿ ನಟೇಶ್ ಬಾಳಿಗ (36) ಎಂದು ಗುರುತಿಸಲಾಗಿದೆ.
ಇವರು ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದು, ಭಾರೀ ಮಳೆಯ ಕಾರಣ ರಭಸದಿಂದ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿಕೊಂಡು ಹೋದರೆನ್ನಲಾಗಿದೆ.ಬಳಿಕ ಹುಡುಕಾಡಿದಾಗ ನಟೇಶ್ ಮೃತ ದೇಹವು ಕೊಲ್ಲೂರಿನ ಮಾವಿನ ಕಾರು ಸೇತುವೆ ಬಳಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಪತ್ತೆಯಾಗಿದೆ. ಈ ಬಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.