ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಆಟಿದ ಲೇಸ್’
ಸಮಾರೋಪ ಕಾರ್ಯಕ್ರಮದಲ್ಲಿ ತುಳು ವರ್ಲ್ಡ್ ಫೌಂಡೇಶನ್ನ ಡಾ. ರಾಜೇಶ್ ಆಳ್ವ, ಮಂದಾರ ಪ್ರತಿಷ್ಠಾನದ ಶಾರದಾಮಣಿ, ಪ್ರಮೋದ್ ಸಪ್ರೆ, ಹರಿಪ್ರಸಾದ್ ರೈ ಜಿ ಕೆ, ತುಳು ಮಹಾಸಭೆಯ ಹರಿಣಾಕ್ಷಿ ಜೆ ರೈ, ಡಾ. ಅನಿಲ್ ಕುಮಾರ್ ರೈ, ಮಿಲನ್ ಗೌಡ ಮತ್ತು ಪುತ್ತೂರು ತುಳು ಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಉಪಸ್ಥಿತರಿದ್ದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಎಂರವರು ಮಂದಾರ ಕೇಶವ ಭಟ್ಟರ ತುಳುಸಾಹಿತ್ಯ ಪ್ರೌಢಿಮೆಯ ಬಗ್ಗೆ ತಿಳಿಸಿ ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾದ ತುಳು ಕೃತಿಗಳನ್ನು ಓದುವಂತೆ ವಿನಂತಿಸಿದರು.
ಕಾಲೇಜಿನ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ತುಳು ಸಾಹಿತ್ಯ ಸಂಘದ ಸಂಯೋಜಕಿ ಅಕ್ಷತಾ ಬಿ. ಸ್ವಾಗತಿಸಿ, ತುಳು ಮಹಾಸಭೆಯ ಪುತ್ತೂರು ತಾಲೂಕಿನ ಸಂಚಾಲಕಿ ಶ್ರೀಶವಾಸವಿ ವಂದಿಸಿದರು. ಕಾಲೇಜಿನ ತುಳು ಸಾಹಿತ್ಯ ಸಂಘದ ನಿರ್ದೇಶಕರು ಹಾಗೂ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥೆಯ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊರವರ ಮಾರ್ಗದರ್ಶನದಂತೆ ಆಟಿದ ಲೇಸ್ ಕಾರ್ಯಕ್ರಮವು ಅರ್ಥಪೂರ್ಣವಾಗಿ ಮೂಡಿಬಂತು.

