ಒಂದು ವಾರದೊಳಗೆ ಬಸ್ ಸ್ಟ್ಯಾಂಡ್ ಪಾಕಿ೯ಂಗ್ ಸಮಸ್ಯೆಗೆ ಕಡಿವಾಣ: ನಾಗರಾಜ ಪೂಜಾರಿ
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ಅವರು ಮಾತನಾಡಿ ತಮ್ಮ ಅಂಗಡಿಯೆದುರು, ಕಟ್ಟಡದೆದುರು ವಾಹನ ನಿಲ್ಲಿಸಬೇಡಿ ಎಂದು ಯಾರೂ ಹೇಳುವಂತಿಲ್ಲ. ಪುರಸಭೆಯು ಆ ಜಾಗಕ್ಕೆ ಡಾಮಾರು ಹಾಕಿ ವ್ಯವಸ್ಥೆ ಮಾಡಿಕೊಟ್ಟ ಬಳಿಕ ಯಾರಿಗೂ ಅಧಿಕಾರವಿಲ್ಲ ಎಂದ ಅವರು ಪುರಸಭೆಯವರು ತಮ್ಮ ಕೆಲಸವನ್ನು ಬೇಗನೇ ಮಾಡಿಕೊಡಿ,ಉಳಿದ ಕೆಲಸವನ್ನು ನಾವು ಮಾಡುತ್ತೇವೆಂದು ಹೇಳಿದರು.
ಮುಖ್ಯಾಧಿಕಾರಿ ಇಂದು ಎಂ.ಅವರು ಸಮಸ್ಯೆಗಳು ಮತ್ತು ವ್ಯಾಪಾರಸ್ಥರ ಅಭಿಪ್ರಾಯ ಪಡಕೊಂಡು ಮಾತನಾಡಿ ಬಸ್ಸುಗಳ ನಿಲುಗಡೆಗೆ ಮಾರ್ಕಿಂಗ್ ಮಾಡಿ ಬ್ಯಾರಿಕೇಡ್ ಹಾಕಲಾಗುವುದು. ಬಸ್ ಮಾಲಕ ಸಂಘದವರು, ಬಾಡಿಗೆದಾರರು, ಸಾರ್ವಜನಿಕರು ಸಹಕರಿಸುವಂತೆ ಕೋರಿದರು.
ವಾಹನಗಳನ್ನು ಪಾರ್ಕಿಂಗ್ ಮಾಡುವುದನ್ನು ತಡೆಯಲು ಈ ಹಿಂದೆ ಇದ್ದ ನಿಯಮಗಳನ್ನು ಪರಿಷ್ಕರಿಸಿ, ಮೂರು ತಿಂಗಳು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಬಸ್ಸು ಮಾಲಕರ ಸಂಘದ ಅಧ್ಯಕ್ಷ ನಾರಾಯಣ ಪಿ.ಎಂ, ಬಸ್ಸು ಮಾಲಕ ಶಶಿ ಅಮೀನ್, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ, ವಾಣಿಜ್ಯ ಸಂಕೀರ್ಣದ ಶೇಖರ್ ಬೊಳ್ಳಿ, ಪ್ರದೀಪ್ ರಾವ್, ಸಂತೋಷ್ ಶೆಟ್ಟಿ, ನಾಗೇಶ್ ಬಂಗೇರ, ನವೀನ್ ಹೆಗ್ಡೆ,ಪತ್ರಕರ್ತರಾದ ಯಶೋಧರ ಬಂಗೇರ, ಪ್ರಸನ್ನ ಹೆಗ್ಡೆ ಮತ್ತಿತರರು ಸಲಹೆಗಳನ್ನು ನೀಡಿದರು.
ಕಂದಾಯ ನಿರೀಕ್ಷಕಿ ಜ್ಯೋತಿ ಎಚ್., ಪುರಸಭೆ ಇಂಜಿಯರ್ ನಳಿನ್ ಕುಮಾರ್ ಪಿ. ಉಪಸ್ಥಿತರಿದ್ದರು.


