ಜೇಸಿಐ ಗಣೇಶಪುರ ಘಟಕದ ನೂತನ ಅಧ್ಯಕ್ಷರಾಗಿ ಜೇಎಫ್ಎಂ ದೇವಿಚರಣ್ ಟಿ. ಶೆಟ್ಟಿ ಆಯ್ಕೆ
ಘಟಕದ 11ನೆಯ ಅಧ್ಯಕ್ಷರಾಗಿ ಚೇಳಾರು ಗ್ರಾಮದ ಐತಿಹಾಸಿಕ ಪುರುಷ ಅಗೋಳಿ ಮಂಜಣ್ಣನ ಚೇಳಾರು ಗುತ್ತು ಮನೆತನದ ಖ್ಯಾತ ವಾಗ್ಮಿ, ಸಾಹಿತಿ, ಪ್ರತಿಷ್ಠಿತ ಎಂ ಆರ್ ಪಿ ಎಲ್ ಸಂಸ್ಥೆಯ ನಿವೃತ್ತ ಮಹಾ ಪ್ರಬಂಧಕರೂ ಆದ ವೀಣಾ ಟಿ ಶೆಟ್ಟಿ ಹಾಗೂ ಉದ್ಯಮಿ ತಾರಾನಾಥ್ ಶೆಟ್ಟಿ ದಂಪತಿಗಳ ಸುಪುತ್ರ ಜೇಎಫ್ಎಂ ದೇವಿಚರಣ್ ಟಿ. ಶೆಟ್ಟಿ ಅವರು ಅಧಿಕಾರ ಸ್ವೀಕರಿಸಿದರು.
ಕಾರ್ಯದರ್ಶಿಯಾಗಿ ಜೇಸಿ ಅಶ್ವಥ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಜೇಸಿ ರಜತ ಶೆಟ್ಟಿ, ಖಜಾಂಚಿಯಾಗಿ ಜೇಸಿ ರಿತೇಶ್, ಮಹಿಳಾ ಜೇಸಿ ಸಂಯೋಜಕರಾಗಿ ಜೇಸಿ ಶುಭಾ ಶರತ್, ಯುವ ಜೇಸಿ ಸಂಯೋಜಕರಾಗಿ ಜೇಜೇಸಿ ವಿನೀತ್ ಅಧಿಕಾರ ವಹಿಸಿಕೊಂಡರು. ಇದೇ ಸಂದರ್ಭದಲ್ಲಿ ಮೂವರು ಹೊಸ ಜೇಸಿ ಸದಸ್ಯರನ್ನು ವಲಯಾಧ್ಯಕ್ಷ ಸಂತೋಷ್ ಶೆಟ್ಟಿಯವರು ಪ್ರಮಾಣವಚನ ಬೋಧಿಸಿ ಬರಮಾಡಿಕೊಂಡರು.
ಜೇಸಿ ವಲಯ 15ರ ಉಪಾಧ್ಯಕ್ಷ ಜೇಸಿ ಅರುಣ್ ಕುಮಾರ್ ಮಾಂಜ ಅವರು ನೂತನ ಸದಸ್ಯರಿಗೆ ಜೇಸಿಐ ಲಾಂಛನದ ಪಿನ್ ನೀಡಿ ಶುಭ ಹಾರೈಸಿದರು.
ವಲಯಾಧ್ಯಕ್ಷರಾದ ಜೇಸಿ ಸಂತೋಷ್ ಶೆಟ್ಟಿ ಯವರು ಮಾತನಾಡಿ, ಜೇಸಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಏಕೈಕ ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿದ್ದು ಈ ಸಂಸ್ಥೆಯ ಮೂಲಕ ಉತ್ತಮ ರೀತಿಯ ತರಬೇತಿಯನ್ನು ಪಡೆಯುವ ಮೂಲಕ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ, ನಾಯಕರಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಆಸರೆ ಚಾರಿಟಬಲ್ ಟ್ರಸ್ಟ್ (ನೋಂ.) ನ ಅಧ್ಯಕರಾದ ಶ್ರೀಮತಿ ಡಾ. ಆಶಾ ಜ್ಯೋತಿ ರೈ ಮಾಲಾಡಿ ಯವರು ಉಪಸ್ಥಿತರಿದ್ದು ನೂತನ ಅಧ್ಯಕ್ಷರು ಹಾಗೂ ತಂಡಕ್ಕೆ ಸಾಮಾಜಿಕ ಕಳಕಳಿಯ ಸಂದೇಶ ನೀಡಿ ಹೃತ್ಪೂರ್ವಕವಾಗಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಗಣೇಶಪುರ ಘಟಕದ ಪೂರ್ವಾಧ್ಯಕ್ಷರುಗಳು, ಜೇಜೇಸಿ ವಿಭಾಗ ಮತ್ತು ಸರ್ವಸದಸ್ಯರನ್ನು ಜೇಸಿ ಆಂದೋಲನಕ್ಕೆ ಅವರ ನಿರಂತರ ಕೊಡುಗೆ ಮತ್ತು ಬೆಂಬಲವನ್ನು ಗುರುತಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಜೇಸಿ ಶ್ರೀಶ ಕರ್ಮಾರನ್ ರವರ ಪೀಠಿಕೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ನೂತನ ಕಾರ್ಯದರ್ಶಿ ಜೇಸಿ ಅಶ್ವಥ್ ಶೆಟ್ಟಿ ವಂದಿಸಿದರು.
ಈ ಸಂದರ್ಭದಲ್ಲಿ ವಲಯ 15ರ ಹಲವಾರು ಜೇಸಿ ಅಧಿಕಾರಿಗಳು, ಇತರ ಘಟಕಗಳ ಸದಸ್ಯರು ಸೇರಿದಂತೆ ಜೇಸಿಯೇತರ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.
