ಪ್ರತಿರೋಧ, ನಿರಾಕರಣೆಯ ಮೂಲಕ ಸೆಣಸಾಟದ ಹೋರಾಟ ರೂಪುಗೊಂಡಾಗ ಮಾತ್ರವೇ ಕಾರ್ಮಿಕ ವರ್ಗದ ವಿಮೋಚನೆ ಸಾಧ್ಯ: ಕೆ.ಎನ್. ಉಮೇಶ್
ನವ ಉದಾರವಾದದ ಬಿಕ್ಕಟ್ಟು ಜಗತ್ತಿನೆಲ್ಲೆಡೆ ತೀವ್ರಗೊಳ್ಳುತ್ತಿದೆ. ಅದರ ಪರಿಣಾಮವಾಗಿ ಯುದ್ಧದ ಭೀತಿ,ವಿಪರೀತ ಬೆಲೆಯೇರಿಕೆಗಳು ಜನಸಾಮಾನ್ಯರ ಬದುಕನ್ನು ಸರ್ವನಾಶ ಮಾಡುತ್ತಿದೆ ಎಂದು ಹೇಳಿದರು
ಇತ್ತೀಚೆಗೆ ವಿಶಾಖಪಟ್ಟಣದಲ್ಲಿ ಜರುಗಿದ CITU ಅಖಿಲ ಭಾರತ ಸಮ್ಮೇಳನದ ವರದಿ ಹಾಗೂ ಸಮ್ಮೇಳನ ಕೈಗೊಂಡ ಅತ್ಯಂತ ಮಹತ್ವದ ತೀರ್ಮಾನಗಳನ್ನು ವಿವರಿಸುತ್ತಾ ಈ ಮಾತುಗಳನ್ನು ಹೇಳಿದರು.
ಹಾಸನದಲ್ಲಿ ಜರುಗಿದ CITU ಕರ್ನಾಟಕ ರಾಜ್ಯ ಸಮ್ಮೇಳನದ ವರದಿಯನ್ನು CITU ರಾಜ್ಯ ಕಾರ್ಯದರ್ಶಿ ಗಳಾದ ಕೆ ಮಹಾಂತೇಶ್ ರವರು ವಿವರಿಸುತ್ತಾ, ರಾಜ್ಯದ ಸಿದ್ದರಾಮಯ್ಯ ಸರಕಾರವೂ ಕೂಡ ಸಾಲರಾಮಯ್ಯ ಸರಕಾರವಾಗಿ ಪರಿವರ್ತನೆಗೊಂಡಿದೆ. ಕಾರ್ಮಿಕ ಸಂಹಿತೆಗಳ ಜಾರಿಗೆ ಅತ್ಯಂತ ಕಠಿಣವಾದ ನಿಯಮಾವಳಿಗಳನ್ನು ರೂಪಿಸಿ ಕಾರ್ಮಿಕ ವರ್ಗಕ್ಕೆ ದ್ರೋಹ ಎಸಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು CITU ದ.ಕ.ಜಿಲ್ಲಾಧ್ಯಕ್ಷರಾದ ಬಿ ಎಂ ಭಟ್ ರವರು ವಹಿಸಿದ್ದರು. ವೇದಿಕೆಯಲ್ಲಿ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್,CITU ರಾಜ್ಯ ನಾಯಕರಾದ ಸುರೇಶ್ ಕಲ್ಲಾಗಾರ,ಚಂದ್ರಶೇಖರ ವಿ ಕುಂದಾಪುರ ರವರು ಉಪಸ್ಥಿತರಿದ್ದರು.
