Moodubidire: ದ್ವಿತೀಯ ಪಿಯುಸಿ ಫಲಿತಾಂಶ-ಮೂಡುಬಿದಿರೆಯ ಎಕ್ಸಲೆಂಟ್ನ ಗುಣಸಾಗರ್ಗೆ 2ನೇ, ಭಾರ್ಗವಿಗೆ 5ನೇ ರ್ಯಾಂಕ್
Thursday, April 11, 2024
ಮೂಡುಬಿದಿರೆ: ಪಿಯುಸಿ ಪರೀಕ್ಷೆಯಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಗುಣಸಾಗರ್ ಸೈನ್ಸ್ನಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಹಾಗೂ ವಾಣಿಜ್ಯ ವಿಭಾಗದಲ್ಲಿ 5ನೇ ಸ್ಥಾನವನ್ನು ಪಡೆದಿರುವ ಭಾರ್ಗವಿ ರಾಜ್ ಅವರನ್ನು ಕಾಲೇಜಿನಲ್ಲಿ ಸಿಹಿ ತಿನ್ನಿಸಿ ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಮತ್ತು ಕಾರ್ಯದರ್ಶಿ ರಶ್ಮಿತಾ ಜೈನ್ ಅವರು ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಸಂಸ್ಥೆಯ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಗುಣಸಾಗರ್ ಅವರ ಹೆತ್ತವರಾದ ತುಮಕೂರಿನ ದಯಾನಂದ ಟಿ.ಎಸ್., ಸವಿತಾ, ಪಿಆರ್ಓ ಚೈತ್ರಾ ಶೆಟ್ಟಿ ಉಪಸ್ಥಿತರಿದ್ದರು.