Mangalore: ಮಳೆಗೂ ಮೊದಲು ರಾಷ್ಟ್ರೀಯ ಹೆದ್ದಾರಿ ಕ್ರಮಕ್ಕೆ ಬ್ರಿಜೇಶ್ ಚೌಟ ಮನವಿ
Saturday, May 4, 2024
ಮಂಗಳೂರು: ಜಿಲ್ಲೆಯಾದ್ಯಂತ ಮಳೆಯ ಮುನ್ನೆಚ್ಚರಿಕೆ ಇದ್ದು ಕುಲಶೇಖರದಿಂದ ಕಾರ್ಕಳ, ಪುಂಜಾಲಕಟ್ಟೆಯಿಂದ ಉಜಿರೆ ಮತ್ತು ಬಿ.ಸಿ.ರೋಡ್ನಿಂದ ಉಪ್ಪಿನಂಗಡಿವರೆಗಿನ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಮುಳ್ಳಯಿ ಮುಗಿಲನ್ ಅವರ ಬಳಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಯವರು ಮಳೆನೀರು ಹರಿದು ಹೋಗಲು ಎನ್ಹೆಚ್ಎಐ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಏಜೆನ್ಸಿಗಳು ಪೂರ್ವಭಾವಿಯಾಗಿ ತಯಾರಿಗಳನ್ನು ನಡೆಸುತ್ತಿದೆ ಎಂಬ ಭರವಸೆ ನೀಡಿದರು.