
ಪಣೋಲಿಬೈಲಿನ ನಟ ದುನಿಯಾವಿಜಯ್ ಭೇಟಿ
Tuesday, October 22, 2024
ಬಂಟ್ವಾಳ: ಚಲನಚಿತ್ರನಟ ದುನಿಯಾ ವಿಜಯ್ ಅವರು ತಾಲೂಕಿನ ಇತಿಹಾಸ ಪ್ರಸಿದ್ದ ಪಣೋಲಿಬೈಲು ಶ್ರೀ ಕಲ್ಲುರ್ಟಿ-ಕಲ್ಕುಡ ದೈವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ದೈವದ ದರ್ಶನ ಪಡೆದರು.
ಕ್ಷೇತ್ರದ ಪ್ರಧಾನ ಅರ್ಚಕ ವಾಸುಮೂಲ್ಯ ಅವರು ಪ್ರಾರ್ಥಿಸಿ ದೈವದ ಗಂಧ ಪ್ರಸಾದ ನೀಡಿದರು.
ಈ ಸಂದರ್ಭ ದುನಿಯಾ ಅವರ ಪುತ್ರಿಯರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಎರಡು ದಿನಗಳ ಹಿಂದೆ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೂ ನಟ ದುನಿಯಾ ವಿಜಯ್ ಭೇಟಿ ನೀಡಿದ್ದರು.