ಸಂತ ಫಿಲೋಮಿನಾ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಏಕದಿನ ಕಾರ್ಯಾಗಾರ ‘ಲಾಟೆಕ್ಸ್ ಸಹಿತ ಶೈಕ್ಷಣಿಕ ಶ್ರೇಷ್ಠತೆ’

ಸಂತ ಫಿಲೋಮಿನಾ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಏಕದಿನ ಕಾರ್ಯಾಗಾರ ‘ಲಾಟೆಕ್ಸ್ ಸಹಿತ ಶೈಕ್ಷಣಿಕ ಶ್ರೇಷ್ಠತೆ’


ಪುತ್ತೂರು: ಅಕ್ಟೋಬರ್ 29ರಂದು ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು ಇದರ ಗಣಿತಶಾಸ್ತ್ರವಿಭಾಗವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಸ್ತುತಿಕೆ ಮತ್ತು ದಾಖಲಿಸುವ ಸಾಮರ್ಥ್ಯಗಳನ್ನು ವೃದ್ಧಿಸುವ ‘ಲಾಟೆಕ್ಸ್ ಸಹಿತ ಶೈಕ್ಷಣಿಕ ಶ್ರೇಷ್ಠತೆ’ ವಿಷಯದ ಮೇಲೆ ಏಕದಿನ ಕಾರ್ಯಾಗಾರ ನಡೆಯಿತು. 

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ವಹಿಸಿಕೊಂಡಿದ್ದು, ಲಾಟೆಕ್ಸ್‌ನ್ನು ಕೇವಲ ವಿಜ್ಞಾನ ಮತ್ತು ಗಣಿತಕ್ಕೆ ಸೀಮಿತವಾಗಿಲ್ಲ ಎಂದು ಒತ್ತಿ ಹೇಳಿದರು. ಇದರ ರೂಪ ಕಲ್ಪನೆ ಶೈಲಿ ಮತ್ತು ಪ್ರಸ್ತುತೀಕರಣ ಸಾಮರ್ಥ್ಯವು ವಿವಿಧ ಶಾಖೆಗಳಲ್ಲಿ ಉಪಯುಕ್ತವಾಗಿದೆ. ಅವರು ವಿದ್ಯಾರ್ಥಿಗಳನ್ನು ಈ ಹೊಸ ಲಾಟೆಕ್ಸ್ ಕೌಶಲ್ಯಗಳನ್ನು ಅರ್ಥಮಾಡಿಕೊಳ್ಳಿ ಮತ್ತು ತಮ್ಮ ಶೈಕ್ಷಣಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಬಳಸಲು ಪ್ರೋತ್ಸಾಹಿಸಿದರು.

ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯ ಕುಮಾರ್ ಮೊಳೆಯಾರ್ ಮಾನ್ಯ ಅತಿಥಿಯಾಗಿದ್ದರು.

ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಸ್ನಾತಕೋತ್ತರ ವಿಭಾಗದ ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜೀವಿತಾ ಕೆ.ಎಸ್. ಲಾಟೆಕ್ಸ್‌ನ ಅಗತ್ಯ ಕೌಶಲ್ಯಗಳನ್ನು ವಿವರಿಸಿ ಪ್ರಾಯೋಗಿಕ, ಮಾರ್ಗದರ್ಶನ ಮಾಡಿದರು, ಇದರಿಂದ ವಿದ್ಯಾರ್ಥಿಗಳು ಲಾಟೆಕ್ಸ್‌ನ ಮೂಲಭೂತ ಆಯಾಮಗಳನ್ನು ಅರ್ಥಮಾಡಿಕೊಂಡರು.

ಗಣಿತ ವಿಭಾಗದ ಮುಖ್ಯಸ್ಥೆ ತನೂಜಾ ಎನ್.ಪಿ., ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ. ಚಂದ್ರಶೇಖರ್, ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರಕ್ಷಿತಾ ಕೆ. ಶೆಟ್ಟಿ, ಮತ್ತು ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪೂಜಾಶ್ರೀ ವಿ. ರೈ ಸೇರಿದಂತೆ ಬಿ.ಎಸ್.ಸಿ. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಾನಸ ಮತ್ತು ತಂಡವು ಪ್ರಾರ್ಥಿಸಿದರು. ಎಸ್.ಎ. ಶಿವಾನಿ ಮಚಯ್ಯ ಸ್ವಾಗತಿಸಿದರು ಮತ್ತು ಫಾತಿಮಾ ಸಫಾ ವಂದಿಸಿ, ಶ್ರೀದೇವಿ ಎನ್. ಕಾರ್ಯಕ್ರಮವನ್ನು ನಿರೂಪಿಸಿದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article