
ಯುಎನ್ಐಸಿಇಎಫ್ನೊಂದಿಗೆ ಮಕ್ಕಳ ಕೇಂದ್ರಿತ ಉಪಕ್ರಮಕ್ಕೆ ಯೋಜನೆ
ಮಂಗಳೂರು: ಯುನೈಟೆಡ್ ನೇಷನ್ ಚಿರ್ಲ್ಡ್ನ್ಸ್ ಎಮರ್ಜೆನ್ಸಿ ಫಂಡ್ (ಯುಎನ್ಐಸಿಇಎಫ್)ನ ಹೈದರಾಬಾದ್ ಫೀಲ್ಡ್ ಆಫೀಸ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (ಎಸ್ಕೆಸಿಆರ್ಡಿಪಿ) ಸಹಭಾಗಿತ್ವದಲ್ಲಿ ಕರ್ನಾಟಕದಲ್ಲಿ ಮಕ್ಕಳ ಕೇಂದ್ರಿತ ಉಪಕ್ರಮಗಳನ್ನು ಬಲಪಡಿಸಲು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಯೋಜನೆಯನ್ನು ರೂಪಿಸಿದೆ.
ಯುಎನ್ಐಸಿಇಎಫ್ನ ಹೈದರಾಬಾದ್ ಫೀಲ್ಡ್ ಆಫೀಸ್ (ಹೆಚ್ಎಫ್ಒ), ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣವನ್ನು ರಾಜ್ಯಗಳ ವ್ಯಾಪ್ತಿಯನ್ನು ಹೊಂದಿದೆ. ಫೀಲ್ಡ್ ಆಫೀಸಿನ ಮುಖ್ಯಸ್ಥ ಡಾ. ಝೆಲಾಲೆಮ್ ಟಫೆಸ್ಸೆ ಅವರ ನೇತೃತ್ವದ ತಂಡ ಇಂದು ಧರ್ಮಸ್ಥಳದಲ್ಲಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ, ಕರ್ನಾಟಕ ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಮಕ್ಕಳ-ಕೇಂದ್ರಿತ ಗಂಭೀರ ಸಮಸ್ಯೆಗಳಾದ ಮಕ್ಕಳ ಬಾಲ್ಯದ ಬೆಳವಣಿಗೆ, ಅಪೌಷ್ಟಿಕತೆ, ಬಾಲ್ಯ ವಿವಾಹ ಸಮಸ್ಯೆ ಮತ್ತು ಸ್ವಚ್ಛತೆ ಹಾಗೂ ನೈರ್ಮಲ್ಯ ಅಭ್ಯಾಸಗಳನ್ನು ಉತ್ತೇಜಿಸುವುದರ ಕುರಿತು ಚರ್ಚಿಸಿದರು.
ಮಕ್ಕಳ ಪಾಲನೆಯಲ್ಲಿ ಪೋಷಕರ ಪಾತ್ರ ಬಹಳ ಮಹತ್ವವಾಗಿದ್ದು, ಅವರನ್ನು ಉತ್ತಮ ಪೋಷಕರನ್ನಾಗಿಸಲು ಮತ್ತು ಮಕ್ಕಳನ್ನು ಸಾಮಾಜಿಕ ಹಾಗೂ ಉತ್ತಮ ವ್ಯಕ್ತಿತ್ವದವರನ್ನಾಗಿಸಲು ಇದು ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ಡಾ. ಟಾಫೆಸ್ಸೆಯವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು (ಎಸ್ಕೆಡಿಆರ್ಡಿಪಿ) ಈ ಕಾರ್ಯಕ್ರಮವನ್ನು ಸ್ವೀಕರಿಸಿದ್ದು, ರಾಜ್ಯಾದ್ಯಂತ ಯಶಸ್ವಿಯಾಗಿ ಅನುಷ್ಠಾನಿಸಲು ತನ್ನ ಒಪ್ಪಿಗೆಯನ್ನು ವ್ಯಕ್ತಪಡಿಸಿದೆ.
ಈ ಸಹಯೋಗವು ಎಸ್ಕೆಡಿಆರ್ಡಿಪಿ ಮತ್ತು ಯುಎನ್ಐಸಿಇಎಫ್ ನಡುವಿನ ಸಹಭಾಗಿತ್ವದಲ್ಲಿ ‘ನೀರು ಉಳಿಸಿ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ರಾಜ್ಯದ 14 ಬರಪೀಡಿತ ಜಿಲ್ಲೆಗಳಲ್ಲಿ ಅನುಷ್ಠಾನಿಸಿದೆ. ಎಸ್ಕೆಡಿಆರ್ಡಿಪಿಯು ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲು ಯೋಜಿಸುತ್ತಿದೆ.
ಸಭೆಯಲ್ಲಿ ಎಸ್ಕೆಡಿಆರ್ಡಿಪಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ ಪೈ, ಯುಎನ್ಐಸಿಇಎಫ್ ಹೆಚ್ಎಫ್ಓ ವಾಶ್ ಸ್ಪೆಷಲಿಸ್ಟ್ ವೆಂಕಟೇಶ ಅರಳಿಕಟ್ಟಿ, ಯುಎನ್ಐಸಿಇಎಫ್ ಹೆಚ್ಎಫ್ಓ ವಾಶ್ ಮತ್ತು ಸಿಸಿಇಎಸ್ ತಜ್ಞ ಡಾ. ಮಟ್ಪಾಡಿ ಪ್ರಭಾತ್ ಕಲ್ಕೂರ, ವಸಂತ್, ಜಗದೀಶ್ ಹಾಗೂ ನಿಖಿಲೇಶ್ ಉಪಸ್ಥಿತರಿದ್ದರು.
ಈ ಸಹಯೋಗವು ಎರಡೂ ಸಂಸ್ಥೆಗಳ ಸಾಂಸ್ಥಿಕ ಸಹಭಾಗಿತ್ವದಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ರಾಜ್ಯದ ಮಕ್ಕಳ ಉಜ್ವಲ ಭವಿಷ್ಯವನ್ನು ಬೆಳೆಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.