
ಯಶಸ್ವಿಯಾಗಿ ನಡೆದ ಪೇಜಾವರ ಶ್ರೀಗಳ ಸಂಸ್ಮರಣೆ, ರಕ್ತದಾನ ಶಿಬಿರ
ಮಂಗಳೂರು: ಯತಿಶ್ರೇಷ್ಠ, ಪದ್ಮವಿಭೂಷಣ, ವೃಂದಾವನಸ್ಥ ಪೇಜಾವರ ಶ್ರೀ ವಿಶ್ವೇಶ್ವತೀರ್ಥ ಶ್ರೀಪಾದರ ಐದನೇ ವರ್ಷದ ಸಂಸ್ಮರಣೆಯ ಅಂಗವಾಗಿ ರಕ್ತದಾನ ಶಿಬಿರ ಮತ್ತು ಸಂಸ್ಮರಣಾ ಕಾರ್ಯಕ್ರಮ ಜ.5ರಂದು ನಂತೂರಿನ ಶ್ರೀ ಭಾರತಿ ಕಾಲೇಜಿನಲ್ಲಿ ನಡೆಯಿತು
ವಿಶ್ವೇಶತೀರ್ಥ ಸಂಸ್ಮರಣಾ ಬಳಗ ಮತ್ತು ಕೃಷ್ಣಾರ್ಪಣಮ್ ಟ್ರಸ್ಟ್ (ನೇತೃತ್ವದಲ್ಲಿ ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮಂಗಳೂರು, ತುಳು ಶಿವಳ್ಳಿ ಬ್ರಾಹ್ಮಣ ಸಂಘ ದ.ಕ., ಹವ್ಯಕ ಮಹಾಮಂಡಲ ಮಂಗಳೂರು, ಕೂಟ ಮಹಾಜಗತ್ತು ಮಂಗಳೂರು, ಸುಬ್ರಹ್ಮಣ್ಯ ಸಭಾ ಮಂಗಳೂರು, ಕರ್ಹಾಡ ಬ್ರಾಹ್ಮಣ ಸಮಾಜ, Sಏಆಃ ಅಸೋಸಿಯೇಷನ್ ಕೊಡಿಯಾಲ್ ಬೈಲ್, ವಿಪ್ರವೇದಿಕೆ ಕೋಡಿಕಲ್, ವಿಪ್ರ ಸಮಾಗಮ ವೇದಿಕೆ ಮಂಗಳೂರು, ಚಿತ್ಪಾವನ ಬ್ರಾಹ್ಮಣ ಸಂಘ ಮತ್ತು ವಿಪ್ರ ಸಮೂಹ ಕೊಂಚಾಡಿ ಇದರ ಸಹಭಾಗಿತ್ವದಲ್ಲಿ ನಡೆದಿದ್ದು ಬೆಳಿಗ್ಗೆ 8.30ಕ್ಕೆ ರೆಡ್ ಕ್ರಾಸ್ ವೈದ್ಯಾಧಿಕಾರಿ ಡಾ. ಜೆ ಎನ್ ಭಟ್ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾವೂರಿನ ಅನಿತಾ ಭಟ್ ಮತ್ತು ಬಳಗ ಹಾಗೂ ಕದ್ರಿಯ ಮಂಜೂಷಾ ತಂಡದವರು ಭಜನಾ ಕಾರ್ಯಕ್ರಮ ನಡೆಸಿ ಕೊಟ್ಟರು.
ರಕ್ತದಾನ ಶಿಬಿರದಲ್ಲಿ 101 ಜನ ರಕ್ತದಾನ ಮಾಡಿದರು.
ವಿಶ್ವತೀರ್ಥ ಸ್ವಾಮೀಜಿಯವರ ಐದನೇ ಸಂಸ್ಮರಣಾ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮುದಾಯದ ಗಣ್ಯರು ಭಾಗವಹಿಸಿ ಶ್ರೀಗಳಿಗೆ ಪುಷ್ಪ ನಮನ ಸಲ್ಲಿಸಿದರು.
ವಿಶ್ವ ಹಿಂದೂ ಪರಿಷತ್ ಪ್ರಾಂತೀಯ ಕಾರ್ಯಾಧ್ಯಕ್ಷ ಡಾ. ಎಂ.ಬಿ. ಪುರಾಣಿಕ್, ಸ್ವಾಮೀಜಿಯವರನ್ನು ಸಂಸ್ಮರಿಸಿದರು.
ತುಳು ಶಿವಳ್ಳಿ ಬ್ರಾಹ್ಮಣ ಸಂಘ, ದಕ ಇದರ ಜಿಲ್ಲಾಧ್ಯಕ್ಷರಾದ ಡಾ. ಎಂ.ಎಂ. ದಯಾಕರ್ ಮಾತನಾಡಿ, ಬ್ರಾಹ್ಮಣ ಸಮುದಾಯದ ಜವಾಬ್ದಾರಿಗಳ ಕುರಿತು ಮಾತನಾಡಿದರು.
ಸ್ವಾಮೀಜಿಯವರ ಒಡನಾಡಿಯಾಗಿದ್ದ ಹಾಗೂ ಅವರ ಸಮಾಜಮುಖಿ ಕಾರ್ಯಗಳ ಉಸ್ತುವಾರಿಯಾಗಿದ್ದ ವಾಸುದೇವ ಭಟ್ ಪೆರಂಪಳ್ಳಿ ಅವರು ಸ್ವಾಮೀಜಿಯವರ ಸರಳತೆ, ಜೀವನೋತ್ಸಾಹ ಹಾಗೂ ಅಧ್ಯಯನಗಳ ಕುರಿತು ವಿಷದವಾಗಿ ವಿವರಿಸಿ ಇಂದಿನ ಯುವ ಜನಾಂಗಕ್ಕೆ ಇವುಗಳು ಮಾರ್ಗದರ್ಶಕವೆಂದು ಹೇಳಿದರು. ಹವ್ಯಕ ಮಂಡಲದ ಉಪಾಧ್ಯಕ್ಷ ರಾಜಶೇಖರ ಭಟ್ ಹಾಗೂ ಎಸ್ಕೆಡಿಬಿ ಅಸೋಸಿಯೇಷನ್ ಪ್ರತಿನಿಧಿ ಸುಧಾಕರ ರಾವ್ ಪೇಜಾವರ, ಸುಬ್ರಹ್ಮಣ್ಯ ಸಭಾ ವತಿಯಿಂದ ಹರ್ಷಕುಮಾರ್ ಕರ್ಹಾಡ ಬ್ರಾಹ್ಮಣ ಸಂಘದ ಪುರುಷೋತ್ತಮ್ ಭಟ್, ಕೂಟ ಮಹಾ ಜಗತ್ತಿನ ಶ್ರೀಧರ ಹೊಳ್ಳ, ಚಿತ್ಪಾವನ ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಹೆಬ್ಬಾರ್ ಉಪಸ್ಥಿತರಿದ್ದರು.
ಕೃಷ್ಣಾರ್ಪಣಮ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಹೆಬ್ಬಾರ್ ಸ್ವಾಗತಿಸಿ, ಟ್ರಸ್ಟ್ ನ ಉಪಾಧ್ಯಕ್ಷ ರಂಗನಾಥ ಅಂಗಿಂತಾಯ ವಂದಿಸಿದರು. ಅನಿಕೇತ್ ಹೆಬ್ಬಾರ್ ಪ್ರಾರ್ಥಿಸಿದರು. ಕೃಷ್ಣಾರ್ಪಣಮ್ ಟ್ರಸ್ಟ್ ನ ಕಾರ್ಯದರ್ಶಿ ಗುರುಪ್ರಸಾದ್ ಕಡಂಬಾರ್ ನಿರೂಪಿಸಿದರು.