
ಬೆಳುವಾಯಿ ಪಂಚಾಯತ್ ಮುಂಭಾಗ ಬಿಜೆಪಿಗರಿಂದ ಪ್ರತಿಭಟನೆ
Monday, June 23, 2025
ಮೂಡುಬಿದಿರೆ: 9/11, ಅಕ್ರಮ ಸಕ್ರಮ, ಹಕ್ಕುಪತ್ರ, ಕೆಂಪು ಕಲ್ಲು ಮರಳಿನ ಸಮಸ್ಯೆ, ವಿದ್ಯುತ್ ಎನ್ ಒಸಿ , ಸಂಧ್ಯಾ ಸುರಕ್ಷಾ ವಿಧವೆ ವೇತನ ಕಡಿತ ಇವುಗಳನ್ನು ವಿರೋಧಿಸಿ ಬಿಜೆಪಿ ಮಂಡಲದ ವತಿಯಿಂದ ಬೆಳುವಾಯಿ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಯಿತು.
ಬಿಜೆಪಿ ಮುಖಂಡ ಗೋಪಾಲ್ ಶೆಟ್ಟಿಗಾರ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್ ಶೆಟ್ಟಿ, ಮಂಡಲ ಕಾರ್ಯಕಾರಿಣಿ ಸದಸ್ಯೆ ವಂದನ ಪ್ರಭು ಸಭೆಯನ್ನು ಉದ್ದೇಶಿಸಿ ಮಾತಾಡಿದರು.
ಪ್ರಮುಖರಾದ ಸದಾನಂದ ಶೆಟ್ಟಿ ಹೆನಬೆಟ್ಟು, ಸುರೇಶ್ ಬೆಳುವಾಯಿ,ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಂತಿ ಸಾಲಿಯಾನ್, ಸೂರಜ್ ಆಳ್ವ, ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.