
‘ಸಾಧನಾಶ್ರೀ’ ಪ್ರಶಸ್ತಿಗೆ ರಶೀದ್ ವಿಟ್ಲ ಆಯ್ಕೆ
Friday, July 25, 2025
ಬಂಟ್ವಾಳ: ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಜೆಸಿಐ ವಲಯ 15ರ ವ್ಯವಹಾರ ಸಮ್ಮೇಳನ-2025ರಲ್ಲಿ ನೀಡಲಾಗುವ ‘ಸಾಧನಾಶ್ರೀ’ ಪ್ರಶಸ್ತಿಗೆ ವಿಟ್ಲ ಜೆಸಿಐಯ ಪೂರ್ವಾಧ್ಯಕ್ಷ, ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕಾದ್ಯಕ್ಷ ರಶೀದ್ ವಿಟ್ಲ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯನ್ನು ಜೆಸಿಐ ಮಡಂತ್ಯಾರ್ ಆತಿಥ್ಯದಲ್ಲಿ ಜು.27ರಂದು ಜರಗುವ ‘ಮೃದಂಗ-ಸಾಧಕ ಜೆಸಿಗಳ ಸಾಧನೆಯ ತರಂಗ’ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.