ಮೂಡುಬಿದಿರೆ: ಪ್ರೇರಣಾ ಶಾಲೆಯಲ್ಲಿ ಆಟಿ-ಕೂಟ ಆಚರಣೆ

ಮೂಡುಬಿದಿರೆ: ಪ್ರೇರಣಾ ಶಾಲೆಯಲ್ಲಿ ಆಟಿ-ಕೂಟ ಆಚರಣೆ


ಮೂಡುಬಿದಿರೆ: ಶತಮಾನೋತ್ಸವದ ಹೊಸ್ತಿಲಲ್ಲಿರುವ ಕಡಲಕೆರೆ ಬಳಿಯ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿ-ಕೂಟ ಕಾರ್ಯಕ್ರಮ ಆಯೋಜಿಸಲಾಯಿತು. 

ನಿರೂಪಕ ನಿತೇಶ್ ರೈ ಕಾರ್ಯಕ್ರಮ ಉದ್ಘಾಟಿಸಿ, ಆಟಿ ತಿಂಗಳು ತುಳುವರ ಪ್ರಮುಖ ಆಚರಣೆಗಳಲ್ಲಿ ಮಹತ್ವ ಪಡೆದ ತಿಂಗಳು. ಭಾರಿ ಮಳೆಯಿಂದಾಗಿ ಉಂಟಾಗುವ ಪ್ರಾಕೃತಿಕ ಬದಲಾವಣೆ, ಅದು ನಮ್ಮ ಆರೋಗ್ಯದಲ್ಲೂ ಏರುಪೇರು ಮಾಡಬಹುದು. ಅದನ್ನು ತಡೆಗಟ್ಟಲು ಪ್ರಕೃತಿಯಿಂದಲೇ ಚಿಕಿತ್ಸೆ ಗುಣವಿರುವ ಆಹಾರವನ್ನು ಅನುಸರಿಸಿದ್ದಾರೆ ಎಂದರು. 

ಶಾಲಾ ಸಂಚಾಲಕರಾದ ಎಂ. ಶಾಂತಾರಾಮ ಕುಡ್ವ, ಸೇವಾಂಜಲಿ ಎಜುಕೇಶನಲ್ ಟ್ರಸ್ಟಿನ ಅಧ್ಯಕ್ಷ ರಾಜೇಶ್ ಬಂಗೇರ, ಮುಖ್ಯ ಶಿಕ್ಷಕ ವತ್ಸಲಾ ರಾಜೇಶ್ ಉಪಸ್ಥಿತರಿದ್ದರು. 

ವಿದ್ಯಾರ್ಥಿ ದೀಪಾಂಶ್ ಆಚಾರ್ಯ ಸ್ವಾಗತಿಸಿದರು. ವೈಷ್ಣವಿ ಎಸ್. ಬಂಗೇರ ನಿರೂಪಿಸಿದರು. ಧೃತಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article