
ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಭವಿಷ್ಯಮುಖಿ ನಾಯಕತ್ವ’ ಕಾರ್ಯಾಗಾರ ಹಾಗೂ ನಿರ್ವಹಣಾ ಸಂಘಟನೆಯ ಉದ್ಘಾಟನೆ
Saturday, August 2, 2025
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ ವ್ಯವಹಾರ ನಿರ್ವಹಣಾ ವಿಭಾಗವು ‘ಭವಿಷ್ಯಮುಖಿ ನಾಯಕತ್ವ’ ಎಂಬ ವಿಷಯವೊಂದರಡಿ ವ್ಯವಹಾರ ನಿರ್ವಹಣಾ ಸಂಘಟನೆಯ ಉದ್ಘಾಟನೆಯು ಹಾಗೂ ಏಕದಿನ ಕಾರ್ಯಾಗಾರ ಗುರುವಾರ ನಡೆಯಿತು.
ಈ ಕಾರ್ಯಕ್ರಮದ ಉದ್ದೇಶವು ವಿದ್ಯಾರ್ಥಿಗಳಲ್ಲಿರುವ ನಾಯಕತ್ವ ಸಾಮರ್ಥ್ಯವನ್ನು ಬೆಳೆಸಿ, ಆಧುನಿಕ ಉದ್ಯೋಗ ಜಗತ್ತಿನಲ್ಲಿ ಮುನ್ನಡೆಸುವ ತಂತ್ರಜ್ಞಾನ ಹಾಗೂ ಜ್ಞಾನವನ್ನು ನೀಡಲು, ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಹಾಗೂ ಬಹರೆನ್ನ ಕಿಂಗ್ಡಮ್ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ, ಎಂಬಿಎ ಕಾರ್ಯಕ್ರಮದ ಸಂಯೋಜಕರಾಗಿಯೂ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಅತಿಥಿ ಡಾ. ಹಬೀಬ್ ಯು.ಆರ್. ರಹ್ಮಾನ್ ಅವರು ದೀಪ ಬೆಳಗಿಸುವ ಮೂಲಕ ಹೊಸ ಶೈಕ್ಷಣಿಕ ಯಾತ್ರೆಯ ಪ್ರಾರಂಭವನ್ನು ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರೆವ್. ಡಾ. ಆಂಟಣಿ ಪ್ರಕಾಶ್ ಮೊಂತೊರೊ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ ಅಗತ್ಯತೆಯನ್ನು ಒತ್ತಿಹೇಳಿದ ಅವರು ಈ ರೀತಿಯ ಸಂಘಟನೆಗಳು ಶೈಕ್ಷಣಿಕ ಉತ್ತೇಜನ, ಸಾಫ್ಟ್ ಸ್ಕಿಲ್ಸ್ ಅಭಿವೃದ್ಧಿ ಮತ್ತು ಸಹಕಾರಾತ್ಮಕ ಅಧ್ಯಯನವನ್ನು ಉತ್ತೇಜಿಸುತ್ತವೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಡಾ. ಹಬೀಬ್ ಯು.ಆರ್. ರಹ್ಮಾನ್ ಅವರ ಚಿಂತನಾತ್ಮಕ ಹಾಗೂ ಪ್ರೇರಣಾದಾಯಕ ಭಾಷಣವು ಯುವ ಮನಸ್ಸುಗಳನ್ನು ಸಾಂಪ್ರದಾಯಿಕ ಸಂಧರ್ಭಗಳ ಪಾರದರ್ಶಿತೆಯಲ್ಲಿ ನಾಯಕತ್ವವನ್ನು ಕಲ್ಪಿಸಿಕೊಳ್ಳಲು ಮತ್ತು ಜಾಗತಿಕ ದೃಷ್ಟಿಕೋನಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿತು.
ನಿರ್ವಹಣಾ ಸಂಘಟನೆಯ ಸಂಚಾಲಕಿ ಮಿಸ್ ಪುಷ್ಪಾ ಎನ್. ಹಾಗೂ ಸಂಘಟನೆಯ ಕಾರ್ಯದರ್ಶಿಯಾಗಿರುವ II BBA ವಿದ್ಯಾರ್ಥಿ ಲಿಖಿತ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಉಪನ್ಯಾಸಕರಾದ ಪ್ರಶಾಂತ್ ರೈ, ಅಭಿಷೇಕ್ ಸುವರ್ಣ, ಸಿಂಚನಾ ಮತ್ತು ಶ್ರುತಿ ರೈ ಅವರ ಸಹಭಾಗಿತ್ವ ಮಹತ್ವಪೂರ್ಣವಾಗಿತ್ತು.
ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಪ್ರಿಯಾ ಆತಿಥ್ಯ ಭಾಷಣ ನೀಡಿದರು. ತೃತೀಯ ಬಿಬಿಎ ವಿದ್ಯಾರ್ಥಿನಿ ಹಾಗೂ ನಿರ್ವಹಣಾ ಸಂಘಟನೆಯ ಅಧ್ಯಕ್ಷೆಯಾಗಿರುವ ದೇವಚಮ್ಮ ವಂದಿಸಿದರು. ಕಾರ್ಯಕ್ರಮವನ್ನು ತೃತೀಯ ಬಿಬಿಎ ವಿದ್ಯಾರ್ಥಿ ರಕ್ಷಿತ್ ನಿರೂಪಿಸಿದರು.